ಮೇ.31ಕ್ಕೆ ನಗರಸಭೆ ಪ್ರಥಮ ದರ್ಜೆ ಸಹಾಯಕ ಕೆ. ಉಮಾನಾಥ್ ಸೇವಾ ನಿವೃತ್ತಿ

0

ಪುತ್ತೂರು: ಪುತ್ತೂರು ನಗರಸಭೆಯ ಪ್ರಥಮ ದರ್ಜೆ ಸಹಾಯಕ ಕೆ.ಉಮಾನಾಥ್ ಅವರು ಮೇ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ.
ಉಳ್ಳಾಲ ಮತ್ತು ಪುತ್ತೂರು ನಗರಸಭೆಯಲ್ಲಿ ಒಟ್ಟು ಸುಮಾರು 31 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಉಳ್ಳಾಲ ಅಂಬೇಡ್ಕರ್ ನಗರ ನಿವಾಸಿ ಕೆ.ಉಮಾನಾಥ್ ಅವರು ಆರಂಭದಲ್ಲಿ ಉಳ್ಳಾಲದಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. 2012ಕ್ಕೆ ಪುತ್ತೂರು ನಗರಸಭಗೆ ವರ್ಗಾವಣೆಗೊಂಡಿದ್ದರು. ಇದೀಗ ಅವರು ನಿವೃತ್ತಿ ಹೊಂದಲಿದ್ದಾರೆ. ಇವರು ಪತ್ನಿ ರೇವತಿ, ಮಗಳು ರಕ್ಷಿತಾ, ಮಗ ಬ್ರಿಜೇಶ್ ಅವರೊಂದಿಗೆ ಉಳ್ಳಾಲದಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here