ಇತಿಹಾಸ ತಜ್ಞ, ವಿಶ್ರಾಂತ ಪ್ರಾಧ್ಯಾಪಕ ಡಾ.ವೈ.ಉಮಾನಾಥ ಶೆಣೈಯವರಿಗೆ ʼಸೇವಾದ್ರುಮʼ ಪ್ರಶಸ್ತಿ

0

ಪುತ್ತೂರು: ಇತಿಹಾಸ ತಜ್ಞ ಹಾಗೂ ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ.ವೈ.ಉಮಾನಾಥ ಶೆಣೈರವರಿಗೆ ದ.ಕ.ಕುಡಾಲ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಂಘದ ವತಿಯಿಂದ ಸೇವಾದ್ರುಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇತಿಹಾಸ ಕ್ಷೇತ್ರದಲ್ಲಿ ಸಮಾಜಕ್ಕೆ ನೀಡಿದ ಸೇವೆಗಳನ್ನು ಪರಿಗಣಿಸಿ ಸಂಘದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಡಾಲ್ ಪ್ರಾಂತ್ಯದ ನಾಲಾವಲಯ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ಅಧ್ಯಕ್ಷ ಸಂಗ್ರಾಮ್ ದೇಸಾಯಿ, ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ತಂತ್ರಿ ಕುಂಟಾರು ರವೀಶ್ ತಂತ್ರಿ, ಮಂಗಳೂರಿನ ಪಿಡಬ್ಲ್ಯೂಡಿ ಗುತ್ತಿಗೆದಾರ ಪ್ರವೀಣ್ ದರ್ಬೆ, ಕಶೆಕೋಡಿ ಶ್ರೀಲಕ್ಷ್ಮಿವೆಂಕಟ್ರಮಣ ದೇವಾಲಯದ ಕಲ್ಲೇಗ ಸಂಜೀವ ನಾಯಕ್, ಮುಂಬೈಯ ಚಾರ್ಟೆಡ್ ಅಕೌಂಟೆಂಟ್ ಅಕ್ಷತಾ ಗೋಪಾಲ್ ನಾಯಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here