ವಿಟ್ಲದ ವಿಶ್ವಾಸನೀಯ ಚಿನ್ನಾಭರಣ ಮಳಿಗೆ ಸಪ್ತ ಜ್ಯುವೆಲ್ಸ್ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ಗೆ ಸ್ಥಳಾಂತರ

0

ಜೂ.5ರಂದು ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಸಂಸ್ಥೆಯ ಉದ್ಘಾಟನೆ

*ವೆಡ್ಡಿಂಗ್ ಸೆಟ್ಟ್ ಗಳ ಬೃಹತ್ ಸಂಗ್ರಹ

*ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂ ಗೆ 100 ರೂಪಾಯಿ ಕಡಿತ

*ಬೆಳ್ಳಿಯ ಆಭರಣಗಳ ಮೇಲೆ 5% ಡಿಸ್ಕೌಂಟ್

*ಪ್ರತೀ 5000 ರೂ ಖರೀದಿಗೆ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶ

*ಸಪ್ತ ಅಕ್ಷಯ ಯೋಜನೆಗೆ ಸೇರುವವರಿಗೆ ಸಿಗಲಿದೆ ವಿಶೇಷ ಉಡುಗೊರೆ

*ವಿಶಾಲವಾದ ವಾಹನ ಪಾರ್ಕಿಂಗ್ ವ್ಯವಸ್ಥೆ

*916 ಶುದ್ಧತೆಯ HUIDಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳು

*ದೇವರ-ದೈವಗಳ ಆಭರಣಗಳು ಮತ್ತು ಪರಿಕರಗಳು

ವಿಟ್ಲ: ಚಿನ್ನಾಭರಣ ಕ್ಷೇತ್ರದಲ್ಲಿ ಅತ್ಯಲ್ಪ ಅವಧಿಯಲ್ಲೇ ಗ್ರಾಮೀಣ ಭಾಗದ ಜನರ ಮನ ಗೆದ್ದ ಸಪ್ತ ವೆಂಚರ್ಸ್‌ನ ಅಧೀನದಲ್ಲಿರುವ ವಿಟ್ಲ ಎಂಪಾಯರ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿದ್ದ ಸಪ್ತ ಜ್ಯುವೆಲ್ಸ್ ಜೂ.5ರಂದು ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ತೃತ ಮಳಿಗೆಗೆ ಸ್ಥಳಾಂತರಗೊಂಡು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಸಪ್ತ ಜ್ಯುವೆಲ್ಸ್‌ನ ವಿಶೇಷತೆಗಳು: ಉತ್ಕೃಷ್ಟ ಆಭರಣಗಳು ವಿಶ್ವಾಸನೀಯ ಬೆಲೆಯಲ್ಲಿ ದೊರೆಯುವ ಸಂಸ್ಥೆ ಇದಾಗಿದೆ. ಗ್ರಾಹಕರ ಆಭರಣಗಳ ವಿನ್ಯಾಸದ ಆಯ್ಕೆಗೆ ವಿಶೇಷ ಸಹಕಾರವನ್ನು ನೀಡಲಾಗುತ್ತಿದೆ ಮಾತ್ರವಲ್ಲದೆ ಪ್ರತಿಯೊಂದು ಆಭರಣಗಳ ತಯಾರಿಕೆಯ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗುತ್ತದೆ. ಎಲ್ಲಾ ವರ್ಗದ ಹಾಗೂ ಎಲ್ಲಾ ಪೀಳಿಗೆಯ ಜನರ ಮನಸ್ಸಿಗೆ ಒಪ್ಪುವಂತಹ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಇದೊಂದು 916 ಶುದ್ಧತೆಯ HUIDಹಾಲ್ ಮಾರ್ಕ್ ಹೊಂದಿರುವ ಚಿನ್ನಾಭರಣಗಳ ಮಾರಾಟ ಮಳಿಗೆಯಾಗಿದೆ.

ವಿವಿಧ ವಿನ್ಯಾಸದ ಚಿನ್ನಾಭರಣಗಳು:
ಸಪ್ತ ಜ್ಯುವೆಲ್ಸ್‌ನಲ್ಲಿ ಸ್ಥಳೀಯ ನುರಿತ ಕುಶಲ ಕರ್ಮಿಗಳಿಂದ ತಯಾರಿಸಲ್ಪಟ್ಟ ವಿವಿಧ ವಿನ್ಯಾಸದ ಚಿನ್ನಾಭರಣಗಳ ಬೃಹತ್ ಸಂಗ್ರಹವಿದೆ. ಪಾರಂಪರಿಕ ಆಭರಣಗಳು, ಮಾಂಗಲ್ಯ ಸರ, ನವರತ್ನದ ಉಂಗುರ, ಲೈಟ್ ವೈಟ್ ರಿಂಗ್ , ಕಾಸ್ಟಿಂಗ್ ರಿಂಗ್, ಕಪಲ್ ರಿಂಗ್, ಕ್ಲೋಸೆಟ್ಟಿಂಗ್ ರಿಂಗ್, ಬರ್ತ್ ಸ್ಟೋನ್ ರಿಂಗ್, ಪವಿತ್ರ ರಿಂಗ್, ಕರ್ಟ್ಸ್ ಬಳೆಗಳು, ಬೆಂಡೋಲೆಗಳು, ಹವಳ-ಮುತ್ತಿನ ಸರಗಳು, ಕೊತ್ತಂಬರಿಸರ, ಮೋಹನಸರ, ಕನಕಸರ, ರೇಡಿಯೋ ಚೈನ್, ಲೈಟ್ ವೈಟ್ ಸಿರಾಮಿಕ್ ಸ್ಟಡ್ಸ್, ಕೊಡಗು ಶೈಲಿಯ ಕೊಕ್ಕೆತಾತಿ ಪೆಂಡೆಂಟ್ ಗಳು, ಕೊಕ್ಕೆತಾತಿ ಕಿವಿಯೋಲೆಗಳು, ಟೆಂಪಲ್ ಕಲೆಕ್ಷನ್ ನಲ್ಲಿ ವಿವಿಧ ರೀತಿಯ ಮೆರುಗನ್ನು ಕೊಡುವ ವಿನ್ಯಾಸಗಳು, ಫೈ ಇನ್ ವನ್ ಹಾರಗಳು, ಫ್ಯೂಜನ್ ಕಲೆಕ್ಷನ್, ಚೆಟ್ಟಿನಾಡ್ ಕಲೆಕ್ಷನ್, ನಕ್ಷಿ ಓರ್ನಮೆಂಟ್ಸ್ ಇವುಗಳಲ್ಲಿ ವೆಡ್ಡಿಂಗ್ ಸೆಟ್ ಹಾಗೂ ಡಿವೈನ್ ಸೆಟ್ ಗಳು ಲಭ್ಯವಿದೆ. ರಿಚ್ ಲುಕ್ ನೀಡುವ ರೂಬಿ, ಎಮ್ರೋಲ್ಡ್ ಸಿಝೆಡ್ ಸ್ಟೋನ್ ಗಳಲ್ಲಿ ಮಾಡಿದ‌ ಚಿನ್ನಾಭರಣಗಳ ಸಂಗ್ರಹವಿದೆ. ಉತ್ತಮ ಕಾರ್ಯ ಕೌಶಾಲ್ಯತೆ ಹೊಂದಿರುವ ಕೊಲ್ಕತ್ತಾ, ಬೆಂಗಾಳಿ, ಬಾಂಬೆ ಶೈಲಿಯ ವೆಡ್ಡಿಂಗ್ ಸೆಟ್ಟ್ ಗಳು ಸಹ ದೊರೆಯುತ್ತಿರುವುದು ಸಂಸ್ಥೆಯ ವಿಶೇಷತೆಯಾಗಿದೆ. ಕೊಲ್ಲಾಪುರ ಲೈಟ್ ವೈಟ್ ವ್ಯಾಕ್ಸ್ ಮಾಲೆಗಳ ಬೃಹತ್ ಸಂಗ್ರಹವೇ ಇಲ್ಲಿದೆ. ಬೆಂಗಾಲಿ ಹ್ಯಾಂಡ್ ಮೇಡ್ ಚೈನ್, ಕೊಯಮುತ್ತೂರು ಸ್ಪೆಷಲ್ ಕಟ್ಟಿಂಗ್ ಚೈನ್, ಕೇರಳ ಹ್ಯಾಂಡ್ ಮೇಡ್ ಚೈನ್ಸ್, ಇಂಡೋ ಇಟೇಲಿಯನ್ ಚೈನ್ಸ್ ಸಹಿತ ಹಲವಾರು ಬಗೆಯ ವಿನೂತನ ಶೈಲಿಯ ಚಿನ್ನಾಭರಣಗಳು ಲಭ್ಯವಿದೆ.

ವಿವಿಧ ವಿನ್ಯಾಸದ ಪೆಂಡೆಂಟ್:

ವಿವಿಧ ವಿನ್ಯಾಸದ ಬೆಂಗಾಳಿ ವರ್ಕ್ ನ ಪೆಂಡೆಂಟ್, ಪಾರಂಪರಿಕ ಲಕ್ಷ್ಮೀ ಪೆಂಡೆಂಟ್, ಮಲ್ಲಿಗೆ ಮೊಗ್ಗು ಪೆಂಡೆಂಟ್, ಗಿಲಿಯೋಲೆ ಪೆಂಡೆಂಟ್, ಪಿಲಿಗಿರಿ ವರ್ಕ್ ಪೆಂಡೆಂಟ್, ಎಂಬೋಸಿಂಗ್ ಪೆಂಡೆಂಟ್ ಸಹಿತ ವಿವಿಧ ರೀತಿಯ ಪೆಂಡೆಂಟ್ ಗಳು ಲಭ್ಯವಿದೆ.

ಬೆಳ್ಳಿಯ ಆಭರಣಗಳು ಲಭ್ಯ: ಕಾಲು ಚೈನ್, ಕಾಲುಂಗುರ, ಸರಗಳು, ಉಂಗುರಗಳು, ಬರ್ತ್ ಸ್ಟೋನ್ ಉಂಗುರಗಳು, ಪೆಂಡೆಂಟ್ ಗಳು, ಮಕ್ಕಳ ದೃಷ್ಟಿಬಳೆ, ದೃಷ್ಟಿ ಚೈನ್ ಗಳು, ಬೆಳ್ಳಿಯ ಮದುಪರ್ಕ, ದೀಪ, ವಿವಿಧ ರೀತಿಯ ಆರತಿಗಳು, ಹರಿವಾಣ, ಬೆಳ್ಳಿಯ ಆರ್ಟ್ ವರ್ಕ್ ಗಳು ಲಭ್ಯವಿದೆ. ಸಿಲ್ವರ್ ಫಾಯಿಲ್ ಕಲೆಕ್ಷನ್ ನ ಫ್ರೇಮ್ ಗಳು, ಪ್ರೈಮಾ ಆರ್ಟ್ ಮತ್ತು ಆರ್ಯ ಆರ್ಟ್ ನ ಬ್ರ್ಯಾಂಡೆಡ್ ಗಿಫ್ಟ್ ಫಾಯಿಲ್ ಕಲೆಕ್ಷನ್ ಗಳು ದೊರೆಯುತ್ತದೆ.

ಉದ್ಘಾಟನಾ ಕೊಡುಗೆಗಳು:
ಸಪ್ತ ಜ್ಯುವೆಲ್ಸ್ ಸಂಸ್ಥೆಯು ಸ್ಥಳಾಂತರಗೊಂಡು ಉದ್ಘಾಟನೆಗೊಳ್ಳಲಿರುವ ಶುಭ ಸಂದರ್ಭದಲ್ಲಿ ತನ್ನ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ನೀಡಲು ಉದ್ದೇಶಿಸಿದೆ. ಚಿನ್ನಾಭರಣ ಖರೀದಿ ವೇಳೆ ಪ್ರತೀ ಗ್ರಾಂ.ಗೆ 100 ರೂಪಾಯಿ ಕಡಿತ ಹಾಗೂ ಬೆಳ್ಳಿ ಆಭರಣಗಳಲ್ಲಿ 5% ಡಿಸ್ಕೌಂಟ್ ದೊರೆಯಲಿದೆ. ಅದು ಅಲ್ಲದೆ ಗ್ರಾಹಕರಿಗೆ ಪ್ರತೀ 5000 ರೂಪಾಯಿ ಮೌಲ್ಯದ ಚಿನ್ನಾಭರಣ ಖರೀದಿ ವೇಳೆ ಅದೃಷ್ಟ ಚೀಟಿ ನೀಡಲಾಗುವುದು. ಈ ಚೀಟಿಯ ಮುಖಾಂತರ ಒಂದು ಪವನ್ ನ ಚಿನ್ನದ ನೆಕ್ಲೆಸ್ ಗೆಲ್ಲುವ ಅವಕಾಶವಿದೆ. ಜೂ.30ರ ವರೆಗೆ ಸಂಸ್ಥೆಯಲ್ಲಿ ಚಿನ್ನಾಭರಣದ ಶುದ್ದತೆಯನ್ನು ಉಚಿತವಾಗಿ ಪರೀಕ್ಷೆ ಮಾಡಿಕೊಡುವ ವ್ಯವಸ್ಥೆಯನ್ನು ಸಂಸ್ಥೆ ಮಾಡಿದೆ.

ವಿಸ್ತಾರವಾದ ಪಾರ್ಕಿಂಗ್:
ಗ್ರಾಮೀಣ ಭಾಗದಿಂದ ವಾಹನಗಳ ಮೂಲಕ ಸಂಸ್ಥೆಗೆ ಆಗಮಿಸುತ್ತಿರುವ ಗ್ರಾಹಕರು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ಸಂಸ್ಥೆ ಸ್ಥಳಾಂತರಗೊಳ್ಳುತ್ತಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವಿಶಾಲವಾದ ಪಾರ್ಕಿಂಗ್ ಸೌಲಭ್ಯವಿದೆ. ಇದು ಚಿನ್ನಾಭರಣ ಖರೀದಿಗೆ ಬರುವ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಲಿದೆ.

ʼಸಪ್ತ ಅಕ್ಷಯ’ ಆಭರಣ ಖರೀದಿ ಯೋಜನೆ:
ಇದು ಗ್ರಾಹಕರಿಗೆ ಉಪಕಾರಿಯಾಗಿರುವ ಒಂದು ಯೋಜನೆಯಾಗಿದೆ. ಗ್ರಾಹಕರು ಪ್ರತಿ ತಿಂಗಳು ತಮ್ಮ ಆದಾಯದಲ್ಲಿನ ಸಣ್ಣ ಮೊತ್ತವನ್ನು ವಿನಿಯೋಗಿಸಿ, ಪ್ರತಿ ವರುಷ ಬಂಗಾರವನ್ನು ಖರೀದಿಸುವ ಒಂದು ಉತ್ತಮ ಯೋಜನೆಯಾಗಿದೆ. ಹನ್ನೊಂದು ತಿಂಗಳ ಯೋಜನೆ ಇದಾಗಿದ್ದು, ಪ್ರತೀ ತಿಂಗಳು 500 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬೇಕಾದರೂ ಪಾವತಿಸಬಹುದಾಗಿದೆ. ಆ ಮೊತ್ತದ ಚಿನ್ನಾಭರಣವನ್ನು ತಮ್ಮ ಅಕೌಂಟಿನಲ್ಲಿ ಜಮೆ ಮಾಡಲಾಗುತ್ತದೆ. ತಾವು ಪಾವತಿಸಿದ ಮೊತ್ತಕ್ಕೆ ಕೊನೆಯಲ್ಲಿ ಆವರ್ತನಾ ಪದ್ಧತಿಯಲ್ಲಿ ಬೋನಸ್ ಲಭಿಸಲಿದೆ. ಸಂಸ್ಥೆಯ ಉದ್ಘಾಟನಾ ಸಂದರ್ಭದಲ್ಲಿ ಸಪ್ತ ಅಕ್ಷಯ ಯೋಜನೆಗೆ ಸೇರ್ಪಡೆಗೊಳ್ಳುವ ಗ್ರಾಹಕರಿಗೆ ವಿಶೇಷ ಉಡುಗೊರೆಗಳು ದೊರೆಯಲಿದೆ.

ಸಪ್ತ ವೆಂಚರ್ಸ್ ಪಾಲುದಾರರು: ಅಜಕ್ಕಳ ಶ್ಯಾಮ ಭಟ್, ಸುದರ್ಶನ್ ಕುಮಾರ್ ಇರ್ಕ್ಲಾಜೆ, ಶಿವಪ್ರಕಾಶ್ ಪಂಜಿಬಲ್ಲೆ, ದೇವಿಪ್ರಸಾದ್ ಚಂಗಲ್ಪಾಡಿ, ನಿಶಾಪ್ರಶಾಂತ್ ಸರಳಾಯ, ಕೃಷ್ಣ ಪ್ರಸಾದ್ ಕಡವ, ಗೋವಿಂದರಾಜ ಕಲ್ಲಮಜಲು, ಸುಕುಮಾರ ಕಲ್ಲಮಜಲು.

ಸಪ್ತ ವೆಂಚರ್ಸ್ ಬಗ್ಗೆ….:
ಕೆಲ ಉತ್ಸಾಹಿ ಸ್ನೇಹಿತರು ಸೇರಿಕೊಂಡು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಪಾಲುಗಾರಿಕೆಯಲ್ಲಿ ಸಪ್ತ ವೆಂಚರ್ಸ್ ಎನ್ನುವ ಸಂಸ್ಥೆಯನ್ನು ಹುಟ್ಟು ಹಾಕಿ 2014ರಲ್ಲಿ ಪೇರಮೊಗರಿನಲ್ಲಿ ಸಪ್ತ ಫುಡ್ ಪ್ರಾಡಕ್ಟ್ ನ್ನು ಆರಂಭಿಸಿದರು. ಇಲ್ಲಿ ಚಪಾತಿ, ಪೂರಿ, ಪರೋಟ, ಅಕ್ಕಿರೊಟ್ಟಿ, ಕಡ್ಲೆಬೇಳೆ ಹೋಳಿಗೆ, ಕಾಯಿಹೋಳಿಗೆ, ಗೋದಿಹಲ್ವಾ, ನೇಂದ್ರ ಬಾಳೆಹಣ್ಣಿನ ಹಲ್ವಾ ಮೊದಲಾದ ಆಹಾರೋತ್ಪಾದನೆಯನ್ನು ಆರಂಭಿಸಲಾಯಿತು. FSSI ಪ್ರಮಾಣೀಕೃತ ಟೆಕ್ನಾಲಜಿಯನ್ನು ಬಳಿಸಿ ಉತ್ಕೃಷ್ಟ ಗುಣಮಟ್ಟದ ಆಹಾರೋತ್ಪಾದನೆಯಲ್ಲಿ ತೊಡಗಿಕೊಂಡ ಸಂಸ್ಥೆ ಅತ್ಯಲ್ಪ ಸಮಯದಲ್ಲೇ ಪ್ರಸಿದ್ಧಿಯನ್ನು ಪಡೆಯಿತು. ಕ್ಲಪ್ತ ಸಮಯದ ಸೇವೆ ಹಾಗೂ ವಸ್ತುವಿನ ಗುಣಮಟ್ಟ ಇವರ ಉತ್ಪನ್ನಗಳನ್ನು ಜನರು ಕೊಳ್ಳುವಂತೆ ಮಾಡಿತ್ತು. ಆ ಬಳಿಕ ಚಿನ್ನಾಭರಣಗಳ ಬಗ್ಗೆ ಅನುಭವ ಪಡೆದುಕೊಂಡ ಪಾಲುದಾರರು ಗ್ರಾಮೀಣ ಭಾಗದ ಜನರಿಗೆ ಮನಸಿಗೊಪ್ಪುವ ಆಭರಣಗಳನ್ನು ವಿಶ್ವಾಸನೀಯ ಬೆಲೆಯಲ್ಲಿ ನೀಡಬೇಕೆನ್ನುವ ನಿಟ್ಟಿನಲ್ಲಿ 2017ರಲ್ಲಿ ವಿಟ್ಲದ ಎಂಪಾಯರ್ ಮಹಲ್‌ನಲ್ಲಿ ಸಪ್ತ ಜ್ಯುವೆಲ್ಸ್ ಅನ್ನುವ ಚಿನ್ನಾಭರಣ ಮಳಿಗೆಯನ್ನು ಹುಟ್ಟು ಹಾಕಿದ್ದರು. ಇದು ಕೂಡ ಅತ್ಯಲ್ಪ ಸಮಯದಲ್ಲೇ ಈ ಭಾಗದ ಜನರ ಮನ ಗೆಲ್ಲುವಲ್ಲಿ ಸಫಲವಾಯಿತು. ಇದೀಗ ಸಂಸ್ಥೆ ಐದನೇ ವರುಷದ ಸಂಭ್ರಮದ ಸಮಯದಲ್ಲಿ ತನ್ನ ಗ್ರಾಹಕರ ಅನುಕೂಲಕ್ಕಾಗಿ ವಿಸ್ತೃತ ಮಳಿಗೆಗೆ ಸ್ಥಳಾಂತರಗೊಳ್ಳಲು ಸಿದ್ದವಾಗಿದೆ.

LEAVE A REPLY

Please enter your comment!
Please enter your name here