ಡಾ.ನಝೀರ್ ಅಹಮ್ಮದ್ ಕ್ಲಿನಿಕ್‌ನಲ್ಲಿ ಥೈರಾಯಿಡ್ ಗ್ರಂಥಿ, ಮಧುಮೇಹದ ಉಚಿತ ತಪಾಸಣಾ ಶಿಬಿರ

0

50 ಮಂದಿ ಫಲಾನುಭವಿಗಳಿಗೆ ಥೈರಾಯ್ಡ್ ಪರೀಕ್ಷೆ
30 ಮಂದಿ ಫಲಾನುಭವಿಗಳಿಗೆ ಮಧುಮೇಹ ಪರೀಕ್ಷೆ
20 ಮಂದಿ ಫಲಾನುಭವಿಗಳಿಗೆ ಉಚಿತ ನ್ಯೂರೋಪತಿ ಪರೀಕ್ಷೆ

ಪುತ್ತೂರು: ವೈದ್ಯಕೀಯ ತಜ್ಞ ಡಾ.ನಝೀರ್ ಅಹಮ್ಮದ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ ಥೈರಾಯಿಡ್ ಗ್ರಂಥಿ ಹಾಗೂ ಮಧುಮೇಹದ ಉಚಿತ ತಪಾಸಣಾ ಶಿಬಿರ ಜೂ.14 ರಂದು ಕಲ್ಲಾರೆ ಕೃಷ್ಣಾ ಆರ್ಕೆಡ್‌ನಲ್ಲಿರುವ ಡಾ.ನಝೀರ್ ಅಹಮ್ಮದ್‌ರವರ ಕ್ಲಿನಿಕ್‌ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.

ಅತಿಯಾದ ದಣಿವು, ಸುಸ್ತು, ನಿತ್ರಾಣ, ಮಲಬದ್ಧತೆ ಅಥವಾ ಅತಿಸಾರ, ಶೀತಕ್ಕೆ ಅಥವಾ ತಾಪಕ್ಕೆ ಅಸಹಿಷ್ಣುತೆ, ಕೂದಲು ಉದುರುವಿಕೆ, ನೆನಪಿನ ಶಕ್ತಿ ಕುಂದುವುದು, ಏಕಾಗ್ರತೆ ಕಷ್ಟವಾಗುವುದು, ತೂಕ ಹೆಚ್ಚಾಗುವುದು ಅಥವಾ ಕಡಿಮೆ ಆಗುವುದು, ಹೆಂಗಸರಿಗೆ ಅತಿಯಾದ ಮಾಸಿಕ ಸ್ರಾವ ಅಥವಾ ನಿಯಮ ತಪ್ಪಿದ ಮಾಸಿಕ ಸ್ರಾವ, ಮೃದುವಾದ ಕರ್ಕಶ ಸ್ವರ, ಗಂಟಲಿನಲ್ಲಿ ಊದುಕೊಳ್ಳುವಿಕೆ, ಅಧಿಕ ಎದೆ ಬಡಿತ ಅಥವಾ ರಕ್ತದೊತ್ತಡವುಳ್ಳವರು ಶಿಬಿರದಲ್ಲಿ ಪಾಲ್ಗೊಂಡು ವೈದ್ಯರಾದ ಡಾ.ನಝೀರ್ ಅಹಮ್ಮದ್ ರವರಲ್ಲಿ ಸೂಕ್ತ ಸಲಹೆಯನ್ನು ಪಡೆದುಕೊಂಡರು.

ಮೆಕ್ಲಿಯೋಯ್ಡ್ ಕಂಪನಿಯ ಜನರಲ್ ಮೇನೇಜರ್ ಆಶಿಮ್ ಚೌಧರಿ, ಪ್ರಾಂತೀಯ ಸೇಲ್ಸ್ ಮೇನೇಜರ್ ಆನಂದ್ ಕಂದ್, ಸೇಲ್ಸ್ ಎಕ್ಸ್ ಕ್ಯೂಟಿವ್ ವೀರೇಂದ್ರ, ಎಸ್.ಆರ್.ಎಲ್ ಲ್ಯಾಬ್ ನ ಚಂದ್ರಕಲಾ, ಡಾ.ನಝೀರ್ ಅಹಮ್ಮದ್ ಡಯಾಬೆಟ್ಸ್ ಸೆಂಟರ್ ನ ಸಿಬ್ಬಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here