ಒಡಿಯೂರು ಶ್ರೀ ಗಳ ಜನ್ಮದಿನೋತ್ಸವದ  ಪ್ರಯುಕ್ತ ಕೆಯ್ಯೂರು ದೇವಳಯದಲ್ಲಿ ಸ್ವಚ್ಚತಾ ಕಾರ್ಯಕ್ರಮ 

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಕ್ಷೇತ್ರ ಮಹಿಷ ಮರ್ದಿನಿ ದುರ್ಗಾಪರಮೇಶ್ವರಿ ದೇವಲಾಯದಲ್ಲಿ ಒಡಿಯೂರು ಶ್ರೀ ಗಳ 62ನೇ ಜನ್ಮ ದಿನಾಚರಣೆಯ ಪ್ರಯುಕ್ತ ಒಡಿಯೂರು ವಿಕಾಸವಾಹಿನಿ ಸ್ವ ಸಹಾಯ ಸಂಘದ ಸದಸ್ಯರಿಂದ ಸ್ವಚ್ಛತಾ ಕಾರ್ಯಕ್ರಮ ಜು.1ರಂದು ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕಲ, ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಗ್ರಾಮ ಸಂಯೋಜಕಿ ಶಶಿ.ಡಿ  ಸೇವಾ ದೀಕ್ಷಿತೆ ಶೃತಿ ರೈ, ಗೀತಾ .ಕೆ.ವಿ, ಹಾಗೂ ವಿಕಾಸ ವಾಹಿನಿ ಸಂಘದ ಸದಸ್ಯರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ದೇವಾಲಯಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಾಬು ಪಾಟಾಳಿ ದೇರ್ಲ, ಮಮತಾ ರೈ ಕೆಯ್ಯೂರು ಸಿಬ್ಬಂದಿ ಚಂದ್ರಶೇಖರ ರೈ ಕಜೆ ಸಹಕರಿಸಿದರು.

LEAVE A REPLY

Please enter your comment!
Please enter your name here