ನೆಲ್ಯಾಡಿ: ಗ್ರಾ.ಪಂ.ಪಿಡಿಒ ಮಂಜುಳರವರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ಕಳೆದ 5 ವರ್ಷಗಳಿಂದ ನೆಲ್ಯಾಡಿ ಗ್ರಾ.ಪಂ.ನಲ್ಲಿ ಪಿಡಿಒ ಆಗಿದ್ದು ತುಮಕೂರು ಜಿಲ್ಲೆಗೆ ವರ್ಗಾವಣೆಗೊಂಡ ಮಂಜುಳ ಎನ್,ಅವರಿಗೆ ಬೀಳ್ಕೊಡುಗೆ ಜು.28ರಂದು ಗ್ರಾ.ಪಂ.ಕಚೇರಿಯಲ್ಲಿ ನಡೆಯಿತು.


ಗ್ರಾ.ಪಂ.ಅಧ್ಯಕ್ಷೆ ಚೇತನಾ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ಶ್ರೀಲತಾ ಸಿ.ಹೆಚ್.ಮಾದೇರಿ, ರವಿಪ್ರಸಾದ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಇಸ್ಮಾಯಿಲ್ ಎನ್.,ರವರು ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಗ್ರಾ.ಪಂ.ವತಿಯಿಂದ ಶಾಲುಹೊದಿಸಿ, ಹಾರಾರ್ಪಣೆ ಮಾಡಿ ಮಂಜುಳ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು. ಸಿಬ್ಬಂದಿಗಳೂ ಪಿಡಿಒ ಅವರನ್ನು ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಪಿಡಿಒ ಮಂಜುಳ ಅವರು ಮಾತನಾಡಿ, ಕಳೆದ ೫ ವರ್ಷಗಳ ಕಾಲ ನೆಲ್ಯಾಡಿ ಗ್ರಾ.ಪಂ.ನಲ್ಲಿ ಪಿಡಿಒ ಆಗಿದ್ದ ವೇಳೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಸದಸ್ಯರಾದ ಆನಂದ ಪಿಲವೂರು, ಜಯಂತಿ, ಮಹಮ್ಮದ್ ಇಕ್ಬಾಲ್, ರೇಷ್ಮಾಶಶಿ, ಉಷಾಜೋಯಿ, ಜಯಲಕ್ಷ್ಮೀಪ್ರಸಾದ್, ಪುಷ್ಪಾ, ಯಾಕುಬ್ ಯಾನೆ ಸಲಾಂ ಪಡುಬೆಟ್ಟು, ಪ್ರಕಾಶ್ ಕೆ., ಗ್ರಾಮಕರಣಿಕರಾದ ಲಾವಣ್ಯ, ಗ್ರಾ.ಪಂ.ಸಿಬ್ಬಂದಿಗಳಾದ ಶಿವಪ್ರಸಾದ್, ಲಲಿತಾ, ಭವ್ಯ, ಸೋಮಶೇಖರ್, ಗಿರೀಶ್, ಲೀಲಾವತಿ, ಅಬ್ದುಲ್ ರಹಿಮಾನ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನೀರು ನಿರ್ವಾಹಕರು, ಮಂಜುಳ ಅವರ ಪತಿ ತಮ್ಮಯ್ಯ ಮತ್ತಿತರರು ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ಆನಂದ ಗೌಡ ಸ್ವಾಗತಿಸಿ, ಲೆಕ್ಕ ಸಹಾಯಕ ಅಂಗು ವಂದಿಸಿದರು.

LEAVE A REPLY

Please enter your comment!
Please enter your name here