ಉಪ್ಪಿನಂಗಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ

0

ಅಧ್ಯಕ್ಷರಾಗಿ ಸುರೇಶ್ ಅತ್ರೆಮಜಲು: ಕಾರ್ಯದರ್ಶಿಯಾಗಿ ವಿದ್ಯಾಧರ ಜೈನ್


ಉಪ್ಪಿನಂಗಡಿ: ಇಲ್ಲಿನ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುರೇಶ್ ಅತ್ರಮಜಲು ಸರ್ವಾನುಮತದಿಂದ ಆಯ್ಕೆಯಾದರು.
ನಿಕಟಪೂರ್ವಾಧ್ಯಕ್ಷ ಚಂದ್ರಶೇಖರ್ ಮಡಿವಾಳರವರ ಅಧ್ಯಕ್ಷತೆಯಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಳದ ವಠಾರದಲ್ಲಿ ಜರಗಿದ ಸಮಿತಿಯ ಮಹಾ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿಯ ಉಪಾಧ್ಯಕ್ಷರಾಗಿ ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾಧರ ಜೈನ್, ಜೊತೆ ಕಾರ್ಯದರ್ಶಿಯಾಗಿ ಕಿಶೋರ್ ಕುಮಾರ್ ಜೋಗಿ, ಕೋಶಾಧಿಕಾರಿಯಾಗಿ ಬಿಪಿನ್ ಜೆ ಆಯ್ಕೆಯಾದರು. ಸಭೆಯಲ್ಲಿ ಈ ಬಾರಿಯ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಹೆಚ್ಚಿನ ಆಕರ್ಷಣೆಯೊಂದಿಗೆ ನಡೆಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಪ್ರಮುಖರಾದ ಗೋಪಾಲ ಹೆಗ್ಡೆ, ರಾಮಚಂದ್ರ ಮಣಿಯಾಣಿ, ಜಯಂತ ಪೋರೋಳಿ, ಯಶವಂತ ಪೈ, ನಂದಾವರ ಉಮೇಶ ಶೆಣೈ, ಯೋಗೀಶ ಶೆಣೈ, ವೈ. ವೆಂಕಟೇಶ ಶೆಣೈ, ಚಂದ್ರಶೇಖರ ಆಚಾರ್ಯ, ಧನಂಜಯ ಗುತ್ತು, ಪ್ರಸಾದ ಭಂಡಾರಿ, ಚಂದ್ರಯ್ಯ ಆಚಾರ್ಯ, ಸುನೀಲ್ ಕುಮಾರ್ ದಡ್ಡು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here