ಚೈತನ್ಯ ಮಿತ್ರ ವೃಂದದಿಂದ ಸ್ವಾತಂತ್ರ್ಯೋತ್ಸವ

0

ಪುತ್ತೂರು: ಚೈತನ್ಯ ಮಿತ್ರ ವೃಂದ ಪಡೀಲ್ ಪುತ್ತೂರು ಇದರ ವತಿಯಿಂದ 77ನೇ ಸ್ವಾತಂತ್ರೋತ್ಸವ ಸಂಸ್ಥೆಯ ನಿವೇಶನದಲ್ಲಿ ಅಧ್ಯಕ್ಷ ಪುರಂದರ ಪಡೀಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಡೀಲ್‌ನ ಅಶೋಕ ಸಂಕೀರ್ಣದ ಮಾಲಕ ಶಾಂತಾ ಉಪೇಂದ್ರ ಆಚಾರ್ಯರವರು ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಸಾಧಿಕ್ ಎಸ್ ಹಾಗೂ ಶ್ರೀ ವಿವೇಕಾನಂದ ಮಹಾವಿದ್ಯಾಲಯದ ವಿಶ್ರಾಂತ ಉಪನ್ಯಾಸಕ ಎಮ್.ಎನ್ ಚೆಟ್ಟಿಯಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಚಾಲಕ ಸಂಪತ್ ಕುಮಾರ್ ಜೈನ್‌ರವರು ಸ್ವಾತಂತ್ರೋತ್ಸವದ ಸಂದೇಶ ನೀಡಿದರು. ಖಜಾಂಚಿ ಮಂಜುನಾಥ್ ಎಮ್ ಸ್ವಾಗತಿಸಿ, ಕಾರ್ಯದರ್ಶಿ ಗಣೇಶ್ ಬಿ ವಂದಿಸಿದರು. ಚಂದ್ರಶೇಖರ್ ಕೇಪುಳು ಕಾರ್ಯಕ್ರಮ ನಿರೂಪಿಸಿದರು. ರಮೇಶ್ ಬಿ, ಅರುಣ್ ಪಡೀಲ್, ಗಣೇಶ್ ಬದಿನಾರ್, ಸುಂದರ ಎಚ್, ಗಣೇಶ್ ಎನ್, ಶಿವರಾಮ ಗೌಡ, ಆನಂದ್ ಧರ್ಭೆ, ಸುರೇಶ್ ರಾಜ್, ಅಶೋಕ್ ಟಿ , ಗೋಪಾಲಕೃಷ್ಣ ಎಮ್ ಈಶ ಸಹಕರಿಸಿದರು. ನಿವೃತ್ತ ವಲಯ ಅರಣ್ಯಾಧಿಕಾರಿ ಬಾಲಕೃಷ್ಣ ಶೆಟ್ಟಿ, ಜಯರಾಮ್, ಅಬ್ದುಲ್ ರಹಿಮಾನ್, ದೇವದಾಸ್, ಸಂಗೀತ ಶಿಕ್ಷಕಿ ವಿದುಷಿ ಸವಿತಾ ಪುತ್ತೂರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here