ರೆಂಜಲಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಸರ್ವೆ ಗ್ರಾಮದ ರೆಂಜಲಾಡಿ ಅಂಗನವಾಡಿ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ನಿವೃತ್ತ ಶಿಕ್ಷಕ ಮಹಾಬಲ ರೈ ಅವರು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯದ ಸಂದೇಶ ಭಾಷಣ ಮಾಡಿದರು. ರಾಧಾಕೃಷ್ಣ ರೈ ರೆಂಜಲಾಡಿ ಶುಭ ಹಾರೈಸಿದರು. ಮುಂಡೂರು ಗ್ರಾ.ಪಂ ಸದಸ್ಯರಾದ ಮಹಮ್ಮದ್ ಆಲಿ, ರಸಿಕಾ ರೈ ಮೇಗಿನಗುತ್ತು, ಮಾಜಿ ಸದಸ್ಯ ಯತೀಶ್ ರೈ ಮೇಗಿನಗುತ್ತು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಚೈತ್ರಾ ಮಧುಚಂದ್ರ ಎಲಿಯ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಪೋಷಕರು, ಊರವರು ಉಪಸ್ಥಿತರಿದ್ದರು.

ಆದರ್ಶ ಸೇವಾ ಸಂಘ ರೆಂಜಲಾಡಿ, ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು, ಜೈ ಹನುಮಾನ್ ಫ್ರೆಂಡ್ಸ್ ರೆಂಜಲಾಡಿ-ಕಲ್ಪಣೆ, ಮೊದಲಾದ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಿಹಿತಿಂಡಿ ವಿತರಿಸಿದರು. ಬಾಲವಿಕಾಸ ಸಮಿತಿ ಸದಸ್ಯ ಕೆ.ಎಂ ಹನೀಫ್ ರೆಂಜಾಲಾಡಿ ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪುಷ್ಪಾವತಿ ವಂದಿಸಿದರು. ಸಹಾಯಕಿ ಭವಾನಿ ಸಹಕರಿಸಿದರು.

LEAVE A REPLY

Please enter your comment!
Please enter your name here