ಕಬಡ್ಡಿ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆಆಯ್ಕೆ

0

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಲ್ನಾಡುಇಲ್ಲಿ ನಡೆದ ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ಮತ್ತು ಬಾಲಕರ ಕಬಡ್ಡಿ ತಂಡವು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಬಾಲಕರ ತಂಡದಲ್ಲಿ ತಶ್ವಿತ್ ರಾಜ್(ಆನಂದ ಪೂಜಾರಿ ಮತ್ತು ಕೆ. ಶುಭ ದಂಪತಿಗಳ ಪುತ್ರ), ಜನಿತ್‌ಕೆ.ಎಸ್(ಕೆ ಸಂಜೀವಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರ), ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), ಹೇಮಂತ್‌ಜೆ.ಕೆ (ಜಯಂತ ಗೌಡ ಮತ್ತು ನಳಿನಿ ಕೆ ದಂಪತಿಗಳ ಪುತ್ರ), ಚಿನ್ಮಯ (ಬಾಬು ನಾಯ್ಕ ಮತ್ತು ಶಶಿಕಲಾ ದಂಪತಿಗಳ ಪುತ್ರ), ಧನ್ವಿತ್ (ನೀಲಪ್ಪ ಗೌಡ ಎಂ ಮತ್ತು ಶಶಿಕಲಾ ದಂಪತಿಗಳ ಪುತ್ರ), ಸಿಂಚನ್ (ವಾಸು ದೇವಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರ),ರಿತೇಶ್ (ವಿಶ್ವಕಿರಣ ಮತ್ತು ಸೀತಾಲಕ್ಷ್ಮೀ) ಕಾರ್ತಿಕ್ (ಈಶ್ವರ ಮತ್ತು ಚಂದ್ರಾವತಿ ದಂಪತಿಗಳ ಪುತ್ರ), ಪ್ರೀತಮ್ (ಶಿವಪ್ಪ ಮತ್ತು ಕಲಾವತಿ ದಂಪತಿಗಳ ಪುತ್ರ), ನರಸಪ್ಪ(ಅಪ್ಪಾಸಾಬ್, ಗೌರವ್ವ ದಂಪತಿಗಳ ಪುತ್ರ), ಪವನ್ (ಶೇಖರ ನಾಯ್ಕ ಮತ್ತುಯಂ ಲಲಿತಾ ದಂಪತಿಗಳ ಪುತ್ರ), ಚೈತನ್ (ಗೋರಕ ಮತ್ತು ಲಲಿತಾ ದಂಪತಿಗಳ ಪುತ್ರ), ನಮೀಶ್ (ಗಿರಿಯಪ್ಪ ನಾಯ್ಕ ಮತ್ತು ಸವಿತಾ ದಂಪತಿಗಳ ಪುತ್ರ).


ಬಾಲಕಿಯರ ತಂಡದಲ್ಲಿ ಕೃತಿಕಾ ಜಿ ( ರವಿ ಮತ್ತು ಯಶೋಧ ದಂಪತಿಗಳ ಪುತ್ರಿ), ಆದ್ಯ ಬಿ.ಆರ್(ರಾಮಣ್ಣ ಗೌಡ ಮತ್ತು ರೇಖಾ ಪಿ ದಂಪತಿಗಳ ಪುತ್ರಿ), ಪಿ ಕವನಶ್ರೀ ( ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಗಳ ಪುತ್ರಿ), ಬಿಂದುಶ್ರೀ ( ಜನಾರ್ದನ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ದೀಕ್ಷಿತಾ ( ದೇವಪ್ಪಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಲೋಚನ ಯಂ ( ಸುಂದರಗೌಡ ಮತ್ತು ಉಷಾ ಕೆ ದಂಪತಿಗಳ ಪುತ್ರಿ), ಪೂಜಾ ( ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ), ಮಾನಸ ಎಂ( ಜಯೇಶ್ ಮತ್ತು ಸುಮಿತ್ರ ದಂಪತಿಗಳ ಪುತ್ರಿ), ಸುಶಾ ಎಂ ( ಕೃಷ್ಣಪ್ಪ ಎಂ ಮತ್ತು ಗೀತಾ ದಂಪತಿಗಳ ಪುತ್ರಿ), ಯಲ್ಲವ್ವ ( ಹನುಮಂತ ಮತ್ತು ಲಕ್ಷ್ಮೀ ದಂಪತಿಗಳ ಪುತ್ರಿ), ತನುಜಾ (ಅಪ್ಪಸಾಬ ಮತ್ತು ಗೌರವ್ವ ದಂಪತಿಗಳ ಪುತ್ರಿ), ಗೋದಾವರಿ ( ಸುನೀಲ ಮತ್ತು ಚಂದ್ರಿಮಾ ದಂಪತಿಗಳ ಪುತ್ರಿ) ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ಹಾಗೂ ಮನೋಹರ್‌ ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here