ಕಲ್ಲೇಗ ದೈವಸ್ಥಾನದಲ್ಲಿ ಶಿವಾಜಿ ಯುವಕ ಮಂಡಲದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಕಲ್ಲೇಗ ಶಿವಾಜಿ ಯುವಕ ಮಂಡಲದ ವತಿಯಿಂದ ಸೆ.10 ರಂದು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದ ವಠಾರದಲ್ಲಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳೊಂದಿಗೆ, ಅಟ್ಟಿ ಮಡಿಕೆ ಉತ್ಸವದೊಂದಿಗೆ ನಡೆಯುವ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಆಮಂತ್ರಣ ಪತ್ರವನ್ನು ಆ.30 ರಂದು ಬೆಳಿಗ್ಗೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿ ಬಿಡುಗಡೆಗೊಳಿಸಲಾಯಿತು.


ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ ಜೀವಂಧರ್ ಜೈನ್ ಮತ್ತು ಕಲ್ಲೇಗ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ ಆಮಂತ್ರಣಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿಕಿರಣ್ ನೆಲಪ್ಪಾಲು, ಮಾದವ ಪಟ್ಲ, ಪ್ರಶಾಂತ್ ಅಜೇಯನಗರ, ಶಿವಾಜಿ ಯುವಕ ಮಂಡಲದ ಅಧ್ಯಕ್ಷ ವಿನಯ, ಕಾರ್ಯದರ್ಶಿ ಸಿದ್ದಾಂತ್ ಅಜೇಯನಗರ, ನಗರಸಭೆ ಸದಸ್ಯ ವಸಂತ ಕಾರೆಕ್ಕಾಡು, ನಿತೀಶ್ ನೆಲಪ್ಪಾಲು, ಪ್ರೀತೇಶ್ ನೆಲಪ್ಪಾಲು, ವಿಜಯ ಪಟ್ಲ, ರಾಜೇಶ್ ಕಲ್ಲೇಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here