ಸುಬ್ರಹ್ಮಣ್ಯ : ದೇವರಗದ್ದೆ ಬಳಿ ಬಾವಿಗೆ ಬಿದ್ದ ಹೋರಿ ,ಮೇಲಕ್ಕೆತ್ತಿ ರಕ್ಷಿಸಿದ ಅಗ್ನಿಶಾಮಕ ದಳ

0

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ಗ್ರಾಮದ ದೇವರ ಗದ್ದೆ ಎಂಬಲ್ಲಿ ವಿಠಲ ಶೆಟ್ಟಿ  ಎಂಬವರ ಬಾವಿಗೆ ಕಳೆದ ಮೂರು ದಿನಗಳ ಹಿಂದೆ ಹೋರಿಯೊಂದು ಬಿದ್ದಿದ್ದು ಸೆ.10 ರಂದು  ಅಗ್ನಿಶಾಮಕ ದಳದವರ ಸಹಾಯದಿಂದ ಅದನ್ನು ಮೇಲಕೆತ್ತಲಾಯಿತು.ಬಾವಿಯು ಸುಮಾರು 40 ಅಡಿಗೂ  ಅಧಿಕ ಆಳವಿದ್ದು ಮೂರು ದಿನಗಳಿಂದ ಸ್ಥಳೀಯರು ಹಗ್ಗದ ಸಹಾಯದಿಂದ ಹೋರಿಯನ್ನು ಮೇಲಕೆತ್ತಲು  ಪ್ರಯತ್ನಿಸಿದರೂ ಅದನ್ನು ಮೇಲಕೆತ್ತಲು ಸಾಧ್ಯವಾಗಿರಲಿಲ್ಲ.

ಈ ಕುರಿತು ಸಮಾಜ ಸೇವಕ ರವಿ ಕಕ್ಕೆಪದವು ಅವರು ಸುಬ್ರಹ್ಮಣ್ಯ ಎಸ್.ಐ ಅವರಿಗೆ ಮಾಹಿತಿ ನೀಡಿದ್ದು ,ಅವರು ಅಗ್ನಿಶಾಮಕ ದಳಕ್ಕೆ  ಮಾಹಿತಿ ನೀಡಿದ್ದಾರೆ‌. ಸುಳ್ಯದ ಅಗ್ನಿ ಶಾಮಕದವರು ಆಗಮಿಸಿ ಹೋರಿಯನ್ನು ಬಾವಿಯಿಂದ ಮೇಲಕ್ಕೆತ್ತಿದರು.  ಸ್ಥಳೀಯರಾದ ಹರೀಶ್ ಇಂಜಾಡಿ, ರವಿ ಕಕ್ಕೆಪದವು, ಕಾರ್ತಿಕ್, ಲತೀಶ್, ರಂಜನ್, ಅಶ್ವಥ್, ಜಯೇಶ್ ಮೊದಲಾದವರು ಸಹಕರಿಸಿದರು.

LEAVE A REPLY

Please enter your comment!
Please enter your name here