ಬೆಟ್ಟಂಪಾಡಿ: ನಿವೃತ್ತ ಅರ್ಚಕ ದಿವಾಕರ ಭಟ್‌ರವರಿಗೆ ಸನ್ಮಾನ

0

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 40 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾದ ದಿವಾಕರ ಭಟ್‌ ಕಾನುಮೂಲೆಯವರಿಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ಸೆ. 10 ರಂದು ದಿವಾಕರ ಭಟ್‌ರವರ ಸ್ವಗೃಹ ಕಾನುಮೂಲೆಯಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವಾಧ್ಯಕ್ಷ ಎನ್‌. ಸಂಜೀವ ರೈ ರವರು ವಹಿಸಿದ್ದರು. ಅತಿಥಿಗಳಾಗಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್‌ ಕುಮಾರ್‌ ಬಲ್ಲಾಳ್‌, ಮೊಕ್ತೇಸರ ವಿನೋದ್‌ ಕುಮಾರ್‌ ರೈ ಗುತ್ತು ಪಾಲ್ಗೊಂಡರು. ದಿವಾಕರ ಭಟ್‌ ಮತ್ತು ವಿಜಯಲಕ್ಷ್ಮಿ ದಂಪತಿಗೆ ಸನ್ಮಾನ ನಡೆಯಿತು. ಸನ್ಮಾನಿತರ ಬಗ್ಗೆ ಸಂಘದ ಹಿರಿಯ ಸದಸ್ಯರಾದ ಬಿ. ವೆಂಕಟ್ರಾವ್‌ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ದಿವಾಕರ ಭಟ್‌ರವರು ಕೃತಜ್ಞತೆ ಸಲ್ಲಿಸಿ ಸಂಘದ ಶ್ರೇಯೋಭಿವೃದ್ದಿಗಾಗಿ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಐ. ಗೋಪಾಲಕೃಷ್ಣ ರಾವ್‌ ಸ್ವಾಗತಿಸಿ, ಕಾರ್ಯದರ್ಶಿ ಪ್ರದೀಪ್‌ ರೈ ಕೆ. ವಂದಿಸಿದರು. ಉಮೇಶ್‌ ಮಿತ್ತಡ್ಕ ನಿರೂಪಿಸಿದರು. ದಿವಾಕರ ಭಟ್‌ರವರ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಅಂಗವಾಗಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರಿಂದ ʻಸುಧನ್ವ ಮೋಕ್ಷʼ ಯಕ್ಷಗಾನ ತಾಳಮದ್ದಳೆ ಇದೇ ವೇಳೆ ನಡೆಯಿತು. 

LEAVE A REPLY

Please enter your comment!
Please enter your name here