ಸುದ್ದಿ ಚಾನೆಲ್ ನೇರಪ್ರಸಾರದಲ್ಲಿ ಶಾಸಕರಿಗೆ ದೂರು-ಗಾಂಧಿಕಟ್ಟೆ ಬಳಿ ಹೊಂಡ ಮುಚ್ಚುವ ಕಾಮಗಾರಿ ಆರಂಭ

0

ಪುತ್ತೂರು:ಇಲ್ಲಿನ ಮುಖ್ಯರಸ್ತೆ ಗಾಂಧಿಕಟ್ಟೆ ಬಳಿಯ ರಸ್ತೆಯಲ್ಲಿರುವ ಭಾರೀ ಗಾತ್ರದ ಹೊಂಡಗಳನ್ನು ಮುಚ್ಚುವ ತುರ್ತು ಕಾಮಗಾರಿ ಶಾಸಕರ ಸೂಚನೆಯಂತೆ ಪ್ರಾರಂಭಗೊಂಡಿದೆ.
ಪೇಟೆಯ ರಸ್ತೆಯಲ್ಲಿ ಹೊಂಡಗಳು, ಅದರಲ್ಲೂ ಗಾಂಧಿಕಟ್ಟೆಯ ಬಳಿ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿರುವುದರಿಂದ ಸಂಚಾರಕ್ಕೆ ಬಹಳಷ್ಟು ಸಮಸ್ಯೆಯಾಗುತ್ತಿರುವ ಕುರಿತು, ಕೆಲ ದಿನಗಳ ಹಿಂದೆ ಸುದ್ದಿ ಯೂ ಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ `ನಮ್ಮೊಂದಿಗೆ ಶಾಸಕರು’ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು.ತಕ್ಷಣ ಸ್ಪಂದಿಸಿದ್ದ ಶಾಸಕ ಅಶೋಕ್ ಕುಮಾರ್ ರೈಯವರು, ಎರಡು ದಿನಗಳೊಳಗೆ ಗಾಂಧಿ ಕಟ್ಟೆ ಬಳಿ ಮುಖ್ಯರಸ್ತೆಯ ಹೊಂಡಗಳನ್ನು ಮುಚ್ಚುವ ತುರ್ತು ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದ್ದರು.ಅದರಂತೆ ಇದೀಗ ಹೊಂಡ ಮುಚ್ಚುವ ತುರ್ತು ಕಾಮಗಾರಿ ನಗರಸಭೆಯಿಂದ ನಡೆಯುತ್ತಿದೆ.ಶಾಸಕರ ಸೂಚನೆಯಂತೆ ಈ ಕಾಮಗಾರಿ ನಡೆಯುತ್ತಿದ್ದು ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here