ದ.ಕ.ಗ್ಯಾರೇಜ್ ಮಾಲಕ ಸಂಘದ ವಿಟ್ಲ ವಲಯದ ನೂತನ ಅಧ್ಯಕ್ಷರಾಗಿ ಲಿಯೋ ಡಿ’ ಲಸ್ರಾದೋ ಆಯ್ಕೆ

0

ವಿಟ್ಲ : ದಕ್ಷಿಣ ಕನ್ನಡ ಗ್ಯಾರೇಜ್ ಮಾಲಕ ಸಂಘ ರಿ. ಮಂಗಳೂರು, ಇದರ ವಿಟ್ಲ ವಲಯದ ನೂತನ ಅಧ್ಯಕ್ಷರಾಗಿ ಲಿಯೋ ಡಿ’ ಲಸ್ರಾದೋ ಆಯ್ಕೆಯಾಗಿದ್ದಾರೆ.ಇತ್ತೀಚಿಗೆ ವಿಟ್ಲದ ಚಂದಳಿಕೆ ಭಾರತ ಆಡಿಟೋರಿಯಂನಲ್ಲಿ ಜರುಗಿದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಬಿ.ಕೆ. ಬಾಬು, ಸಂಚಾಲಕರಾಗಿ ಉಮ್ಮರ್ ಕೆಲಿಂಜ, ಉಪಾಧ್ಯಕ್ಷರಾಗಿ ನಿತ್ಯಾನಂದ ಹಾಗೂ ವೆಂಕಟ್ರಮಣ ಭಟ್, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷ್ಮಣ ಬಿ.ಎಸ್., ಜೊತೆ ಕಾರ್ಯದರ್ಶಿಗಳಾಗಿ ದಿನೇಶ್, ಅರುಣ್, ಪುರಂದರ , ಕೋಶಾಧಿಕಾರಿಯಾಗಿ ಪುರುಷೋತ್ತಮ, ಲೆಕ್ಕಪರಿಶೋಧಕರಾಗಿ ಪಡಾರು ಚಂದ್ರಶೇಖರ ಭಟ್ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ನೆಗಳಗುಳಿ ಸುಂದರ ಆಚಾರ್ಯ, ಹರೀಶ್ ಆಚಾರ್ಯ ವಿಟ್ಲ, ಲಕ್ಷ್ಮಣ ಪೂಜಾರಿ ಆರ್.ಎಸ್. ರವರನ್ನು ನಿಯೋಜಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here