ಮಂಗಳೂರು;ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು: ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಮಂಗಳೂರು ಇದರ 13ನೇ ವಾರ್ಷಿಕ ಸಾಮಾನ್ಯ ಸಭೆಯು ಸಹಕಾರಿಯ ಅಧ್ಯಕ್ಷರಾದ ಎಸ್.ಸತೀಶ್ ನಾಯಕ್‌ರವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ವಿ.ಟಿ ರಸ್ತೆಯ ಶ್ರೀ ವಿಠೋಭಾ ರುಕುಮಾಯಿ ದೇವಸ್ಥಾನದ ರಾಜಾಂಗಣದಲ್ಲಿ ಸೆ.10 ರಂದು ನಡೆಯಿತು.


ಸಹಕಾರಿಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ದೀಪ ಪ್ರಜ್ವಲಿಸಿ ಮಹಾಸಭೆಯ ಉದ್ಘಾಟನೆ ಮಾಡಿದರು. ಸಹಕಾರಿ ಸಂಸ್ಥೆಯ ಸ್ಥಾಪಕ ನಿರ್ದೇಶಕರಲ್ಲೋರ್ವರಾದ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್‌ರವರು ಮಾತನಾಡಿ, ಮುಂದಿನ ದಿನಗಳಲ್ಲಿ ಸಹಕಾರಿಯು ಜಿಲ್ಲೆಯಲ್ಲೇ ಒಂದು ಮಾದರಿ ಸಹಕಾರಿಯಾಗಿ ಅತೀ ಹೆಚ್ಚಿನ ವ್ಯವಹಾರ ಮಾಡಲು ಸದಸ್ಯರೆಲ್ಲರ ತುಂಬು ಹೃದಯದ ಪ್ರೋತ್ಸಾಹ ನೀಡಿ ಸಹಕರಿಸಬೇಕು ಎಂದು ಹೇಳಿ ಭುವನೇಂದ್ರ ಸಹಕಾರಿಯ ಕಳೆದ 13 ವರ್ಷಗಳ ಪ್ರಗತಿಯನ್ನು ಅಂಕಿ ಅಂಶಗಳೊಂದಿಗೆ ಸಭೆಗೆ ತಿಳಿಸಿದರು.


ಸಹಕಾರಿಯ ಅಧ್ಯಕ್ಷರಾದ ಎಸ್.ಸತೀಶ್ ನಾಯಕ್‌ರವರು 2022-23ನೇ ಸಾಲಿನ ಆಡಳಿತ ಮಂಡಳಿಯ ವಾರ್ಷಿಕ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷರಾದ ಸಿಎ ಎಂ.ಜಗನ್ನಾಥ ಕಾಮತ್‌ರವರು ಸಹಕಾರಿಯ 2022-23ನೇ ಸಾಲಿನ ಲೆಕ್ಕಪರಿಶೋಧಿತ ಲೆಕ್ಕಪತ್ರವನ್ನು ಮಂಡಿಸಿದರು. ಶ್ರೀಮತಿ ಪ್ರತೀಕ್ಷಾ ಪ್ರಭು ಮತ್ತು ಶ್ರೀಮತಿ ಶ್ವೇತಾ ಪ್ರಭುರವರು ಪ್ರಾರ್ಥಿಸಿದರು. ಸಹಕಾರಿಯ ಉಪಾಧ್ಯಕ್ಷರಾದ ಸಿಎ ಜಗನ್ನಾಥ ಕಾಮತ್ ಸ್ವಾಗತಿಸಿದರು. ಸಹಕಾರಿಯ ನಿರ್ದೇಶಕರಾದ ಕೆ.ಸುನಿಲ್ ಶೆಣೈರವರು ತಿಳುವಳಿಕೆ ಪತ್ರವನ್ನು ಓದಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಮಲಾಕ್ಷ ಎಚ್.ಎಲ್‌ರವರು 2024-25, 2025-26ನೇ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು. ಸಹಕಾರಿಯ ನಿರ್ದೇಶಕಿ ಶ್ರೀಮತಿ ಶಾರದಾ ಜಿ.ನಾಯಕ್ ವಂದಿಸಿದರು. ನಿರ್ದೇಶಕಿ ಶ್ರೀಮತಿ ನಿವೇದಿತಾ ಜಿ.ಪ್ರಭು ಕಾರ್ಯಕ್ರಮ ನಿರೂಪಿಸಿದರು. ಸಹಕಾರಿಯ ಎಲ್ಲಾ ನಿರ್ದೇಶಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈರ್ವರಿಗೆ ಸನ್ಮಾನ..
ಈ ಸಂದರ್ಭದಲ್ಲಿ ಭುವನೇಂದ್ರ ಸೇವಾ ಪ್ರತಿಷ್ಠಾನ, ಪ್ರವರ್ತಕರು ಶ್ರೀ ಭುವನೇಂದ್ರ ಸ್ವಾಮೀಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮಂಗಳೂರು ಇದರ ವತಿಯಿಂದ ನಮ್ಮ ಸಮಾಜದ ಅತೀ ಹಿರಿಯ ಈರ್ವರು ಗಣ್ಯ ವ್ಯಕ್ತಿಗಳಾದ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಿರಿಯ ಉದ್ಯಮಿ ವಿಠಲ್ ಕಿಣಿ ಹಾಗೂ ಬಡಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡುತ್ತಿರುವ ಎ.ಕೆ ಮಂಜುನಾಥ ಶೆಣೈರವರಿಗೆ ಶಾಲು ಹೊದಿಸಿ ಶ್ರೀ ಭುವನೇಂದ್ರ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಪ್ರಶಸ್ತಿ ೨೦೨೩ ನೀಡಿ ಸನ್ಮಾನಿಸಲಾಯಿತು. ಈ ಸನ್ಮಾನವನ್ನು ನಮ್ಮ ಸಹಕಾರಿಯ ಸ್ಥಾಪಕ ನಿರ್ದೇಶಕರಲ್ಲೋರ್ವರಾದ ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್‌ರವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here