ಜೆಸಿಐ ವಿಟ್ಲ ಘಟಕದಿಂದ ಜೆಸಿಐ ಸಪ್ತಾಹ -2023ರ ಸಮಾರೋಪ ಸಮಾರಂಭ, ಸಾಧಕರಿಗೆ ಸನ್ಮಾನ – ಪೂರ್ವಾಧ್ಯಕ್ಷರಿಗೆ ಗೌರವಾರ್ಪಣೆ

0

ವಿಟ್ಲ: ಜೆಸಿಐ ವಿಟ್ಲದ ಜೆಸಿಐ ಸಪ್ತಾಹ 2023”ಜೈತ್ರ”ದ ಸಮಾರೋಪ ಸಮಾರಂಭ ಕಾರ್ಯಕ್ರಮವು ವಿಟ್ಲದ ಸಿಂಹಗಿರಿ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.

ಜೆಸಿಐ ವಿಟ್ಲ ಘಟಕದ ಅಧ್ಯಕ್ಷರಾದ ಪರಮೇಶ್ವರ ಹೆಗಡೆ ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಖ್ಯಾತಿಯ ಜಾದು ಕಲಾವಿದರಾದ ಕುದ್ರೋಳಿ ಗಣೇಶ್ ರವರು ಘಟಕದ ಪರವಾಗಿ ಸನ್ಮಾನ ಸ್ವೀಕರಿಸಿ ಶುಭಹಾರೈಸಿದರು.
ದ.ಕ.ಜಿಲ್ಲಾ ಪ್ರೌಢ ಶಾಲಾ ಸಹಶಿಕ್ಷಕರ ಸಂಘ ಜಿಲ್ಲಾಧ್ಯಕ್ಷರಾದ ಮಹಮ್ಮದ್ ರಿಯಾಝ್ ರವರು ಮುಖ್ಯ ಅಥಿತಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜೆಸಿಐ ವಿಟ್ಲ ಘಟಕದ 41 ಪೂರ್ವಾಧ್ಯಕ್ಷರಿಗೆ ಗೌರವ ಸಮರ್ಪಣೆ ನಡೆಯಿತು.
ವಿಟ್ಲ ಪರಿಸರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ‌ ಸಾಧಕರಾದ ಕೃಷಿ ಕ್ಷೇತ್ರದ ಸಾಧಕ ನಿಶ್ಚಲ್ ಶೆಟ್ಟಿ ಇರ ಕಲ್ಲಾಡಿ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ರವಿಕಿರಣ್ ಯಂ.ಜಿ, ಕಲಾ ಕ್ಷೇತ್ರದ ಸಾಧಕ ಸಬ್ಬಣ್ಣಕೋಡಿ ರಾಮ ಭಟ್ಟ, ಉದ್ಯಮ ಕ್ಷೇತ್ರದ ಸಾಧಕ ಎಂ. ಸುಭಾಷ್ ಚಂದ್ರ ನಾಯಕ್ , ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧಕ ಮನೋರಂಜನ್ ಕರೈ ಹಾಗೂ ಶಿಕ್ಷಣ ಕ್ಷೇತ್ರದ ಸಾಧಕ ವಿಶ್ವನಾಥ ಗೌಡ ಕುಳಾಲುರವರನ್ನು ಸನ್ಮಾನಿಸಲಾಯಿತು

ಜೆಸಿಐ ವಿಟ್ಲ ಘಟಕದ ನಿಕಟ ಪೂರ್ವಾಧ್ಯಕ್ಷರಾದ ಚಂದ್ರಹಾಸ ಕೊಪ್ಪಳ ಹಾಗೂ ಜೆಜೆಸಿ ಅಧ್ಯಕ್ಷರಾದ ತೇಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಪ್ತಾಹದ ನಿರ್ದೇಶಕರಾದ ರಿತೇಶ್ ಶೆಟ್ಟಿ ಸಪ್ತಾಹದ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು. ಘಟಕದ ಕಾರ್ಯದರ್ಶಿ ದೀಕ್ಷಿತ್ ವಂದಿಸಿದರು.

LEAVE A REPLY

Please enter your comment!
Please enter your name here