ಕೀರ್ತನ ಸೌಹಾರ್ದ ಸಹಕಾರಿ ವಾರ್ಷಿಕ ಮಹಾಸಭೆ

0

ಪುತ್ತೂರು :ಬೊಳುವಾರು ಸೂರ್ಯಪ್ರಭಾ ಸಂಕೀರ್ಣದಲ್ಲಿ ವ್ಯವಹರಿಸುತ್ತಿರುವ ಕೀರ್ತನ ಸೌಹಾರ್ದ ಸಹಕಾರಿ ಇದರ 22-23 ನೇ ಸಾಲಿನ ವಾರ್ಷಿಕ ಮಹಾಸಭೆಯು
ಸೆ.24 ರಂದು ಸಹಕಾರಿ ಸಭಾಂಗಣದಲ್ಲಿ ನಡೆಯಿತು.


ಸಹಕಾರಿಯ ಅಧ್ಯಕ್ಷ , ಪ್ರಗತಿ ಆಸ್ಪತ್ರೆ ಇದರ ಆಡಳಿತಾಧಿಕಾರಿ , ಡಾ.ಶ್ರೀಪತಿ ರಾವ್ ಅಧ್ಯಕ್ಷತೆ ವಹಿಸಿ ಮಾತನಾಡಿ , ಪ್ರಥಮವಾಗಿ ಮುಂದಿನ 5 ವರುಷದ ಅವಧಿಗೆ ನನ್ನನ್ನು ಅಧ್ಯಕ್ಷನನ್ನಾಗಿ ಆರಿಸಿದ ಎಲ್ಲರಿಗೂ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ, ಸಹಕಾರ ಸದಾವಿರಲಿ ಜೊತೆಗೆ ಅಭಿವೃದ್ಧಿ ಕಾರ್ಯಕ್ಕೂ ಸಂಪೂರ್ಣ ಬೆಂಬಲ ಸಿಗಲಿಯೆಂದು ಆಶಯ ವ್ಯಕ್ತಪಡಿಸಿದ್ದರು. ಬೈಲಾ ತಿದ್ದುಪಡಿ ಮೂಲಕ ಕಾರ್ಯಕ್ಷೇತ್ರ ವನ್ನು ವಿಸ್ತರಿಸುವ ಹಾಗೂ ಸ್ವ ಸಹಾಯ ಸಂಘದ ರಚನೆ ಜೊತೆಗೆ ಇನ್ನೂ ಹಲವು ಉತ್ತಮ ಯೋಜನೆಯನ್ನು ಹಮ್ಮಿಕೊಳ್ಳಲು ಪ್ರತಿಯೊಬ್ಬರ ಬೆಂಬಲ , ಸಹಕಾರ ಕೋರಿ , ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಗೆ ಸಹಕರಿಸಿದ ಸದಸ್ಯರೂ ಹಾಗೂ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನಪೂರ್ಣೇಶ್ವರಿ ಕೆ.ಆರ್ ವರದಿ ವಾಚಿಸಿದರು. ಸಿಬ್ಬಂದಿ ಅನಿತಾ ಹೆಗ್ಡೆ ಗತ ವರದಿ ವಿವರ ನೀಡಿದರು. ನಿರ್ದೇಶಕ ವಿರೂಪಾಕ್ಷ ಭಟ್ ಆಡಳಿತ ಮಂಡಳಿಯ ವರದಿ , ಅಂಕಿ ಅಂಶ ತಿಳಿಸಿದರು. ಉಪ ವಿಧಿ ತಿದ್ದುಪಡಿ ಬಗ್ಗೆ ನಿರ್ದೇಶಕ ಉದಯ ಕುಮಾರ್ ಮಾಹಿತಿ ನೀಡಿದರು. 23-24 ನೇ ಸಾಲಿನ ವಾರ್ಷಿಕ ಬಜೆಟ್ ಬಗ್ಗೆ ನಿರ್ದೇಶಕ ಮುರಳಿ ಶ್ಯಾಮ್ ತಿಳಿಸಿದರು.


ಬಳಿಕ ನಿಕಟಪೂರ್ವ ಅಧ್ಯಕ್ಷ ವಸಂತ ಕಾಮತ್ ಇವರನ್ನು ಸಂಘದ ಪರವಾಗಿ ಗೌರವಿಸಲಾಯಿತು. ಈ ವೇಳೆನಿರ್ದೇಶಕರುಗಳಾದ ಗೋವಿಂದ ನಾಯಕ್ ಎಸ್.ಎಲ್ , ದಿವಾಕರ ಬಲ್ಲಾಳ್ ಸಹಿತ ಸದಸ್ಯರು ಹಾಜರಿದ್ದರು .ಉಪಾಧ್ಯಕ್ಷ ಪ್ರಸನ್ನ ಕುಮಾರ್ ಸ್ವಾಗತಿಸಿ ,ನಿರ್ದೇಶಕಿ ವೀಣಾ ಕುಮಾರಿ ಪ್ರಾರ್ಥನೆ ನೆರವೇರಿಸಿ ,ನಿರ್ದೇಶಕಿ ದೀಪಾ ನಾಯಕ್ ವಂದಿಸಿದರು. ಪಿಗ್ಮಿ ಸಂಗ್ರಹಕರಾದ ಕಿಶೋರ್ ಭಟ್ ಮತ್ತು ಶಿವಪ್ರಸಾದ್ ಎಲ್ಲ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here