ಇಂದ್ರಪ್ರಸ್ಥ ವಿದ್ಯಾಲಯದ 14ರ ವಯೋಮಾನದ ಬಾಲಕರ ತಂಡ ಮೈಸೂರು ವಿಭಾಗೀಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆ

0

ಉಪ್ಪಿನಂಗಡಿ: ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ಸರಕಾರಿ ಪ್ರೌಢಶಾಲೆ ಏನೆಕಲ್ಲು ಇಲ್ಲಿ ಸೆ.27ರಂದು ನಡೆದ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ 14 ವಯೋಮಾನದ ಬಾಲಕರ ತಂಡವು ಪ್ರಥಮ ಸ್ಥಾನವನ್ನು ಪಡೆದು ಮೈಸೂರು ವಿಭಾಗೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ 17ರ ವಯೋಮಾನದ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿರುತ್ತಾರೆ.

14ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 8ನೇ ತರಗತಿಯ ಕವೀಶ್ ಬಿ.ಕೆ. ಆಯುಶ್ ಶೆಟ್ಟಿ, 7ನೇ ತರಗತಿಯ ಸಮೃದ್ಧ್ ಜೈನ್, ಆಯತುಲ್ಲ ಸಲೀಂ, ಜಿತೇಶ್ ಎಸ್. ವಿ., ಶ್ರೇಯಸ್, ಪ್ರೀತಮ್, ಮೊಹಮ್ಮದ್ ಅಝ್ಮಲ್, 6ನೇ ತರಗತಿಯ ಶಿಶಿರ್ ಜೆ. ಸಾಲ್ಯಾನ್, ಇರಾಝ್, ಸುಜಿತ್ 17 ರ ವಯೋಮಾನದ ಬಾಲಕರ ತ್ರೋಬಾಲ್ ವಿಭಾಗದಲ್ಲಿ 10ನೇ ತರಗತಿಯ ದೃಶ್, ಸೌರವ್ ಜಿ ಆಳ್ವ, ಸಾತ್ವಿಕ್, ಮೊಹಮ್ಮದ್ ರಹೀಫ್, ಹೃಷಿಕೇಶ್, 9ನೇ ತರಗತಿಯ ಆಕಾಶ್ ರೈ, ಅಕ್ಷಜ್ ಶೆಟ್ಟಿ, ಅನೂಪ್ ಸಿಂಗ್, ಅಹಮ್ಮದ್ ಶಬೀರ್, ಪುನೀತ್, ಮೋಹಿತ್ ಡಿ ಗೌಡ, 8ನೇ ತರಗತಿಯ ಚಿಂತನ್ ಕೆ. ಸಿ ಭಾಗವಹಿಸಿರುತ್ತಾರೆ. ಮೊಹಮ್ಮದ್ ರಹೀಫ್ ಉತ್ತಮ ಹಿಡಿತಗಾರನಾಗಿ, ಕವೀಶ್ ಸವ್ಯಸಾಚಿ ಆಟಗಾರರಾಗಿ ಆಯ್ಕೆಯಾಗಿರುತ್ತಾರೆ. ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ವಿದ್ಯಾ ತರಬೇತಿ ನೀಡಿದ್ದಾರೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕಿ ವೀಣಾ ಆರ್ ಪ್ರಸಾದ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here