ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ

0

ನಿಡ್ಪಳ್ಳಿ; ಬೆಟ್ಟಂಪಾಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಅ.7 ರಂದು ನಡೆಯಲಿರುವ  ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ವಲಯ ಮಟ್ಟದ ಕ್ರೀಡಾ ಕೂಟದ “ಬಿಲ್ವಗಿರಿ ಕ್ರೀಡಾ ಹಬ್ಬ – 2023” ಇದರ ಆಮಂತ್ರಣ ಪತ್ರಿಕೆಯನ್ನು ಹಿರಿಯರಾದ ವೆಂಕಟ್ರಾವ್ ಬೆಟ್ಟಂಪಾಡಿ ಮತ್ತು  ಕೆ.ಪರಮೇಶ್ವರ ಭಟ್ ಕೋನಡ್ಕ ಅ.2 ರಂದು ಬಿಡುಗಡೆಗೊಳಿಸಿದರು. 

 ಶಾಲಾ ಮುಖ್ಯ ಗುರು ವಿಜಯ ಕುಮಾರ್.ಎಂ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಬ್ದುಲ್ ರಝಾಕ್,  ಕಾರ್ಯದರ್ಶಿ ಅಬ್ದುಲ್ ಶೆಮೀರ್ ,ಕೋಶಾಧಿಕಾರಿ ನಿಖಿಲ್ ಮಡ್ಯಂಪಾಡಿ ಗಣೇಶ, ದಿನೇಶ ಮಿತ್ತಡ್ಕ, ಶೇಷನ್ ಪಾರ, ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ, ಸಹಶಿಕ್ಷಕಿಯರಾದ ಭಾರತಿ, ಉಮಾ, ಸೌಮ್ಯಲಕ್ಷ್ಮೀ,ಮಂಜುಳಾ, ವಿನುತ ಮತ್ತು ಶಾಲಾ‌ ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here