ಬಹು ನಿರೀಕ್ಷಿತ ಮಿಡಿತ ಕನ್ನಡ ಕಿರುಚಿತ್ರ ಅ.14ರಂದು ಟಾಕೀಸ್ ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ

0

ಪುತ್ತೂರು: ಬಹು ನಿರೀಕ್ಷಿತ ಮಿಡಿತ ಕನ್ನಡ ಕಿರುಚಿತ್ರ ಅ.14ರಂದು ಸಂಜೆ 6 ಗಂಟೆಗೆ ಟಾಕೀಸ್ ಕನ್ನಡ ಯೂಟ್ಯೂಬ್‌ ಚಾನೆಲ್‌ ನಲ್ಲಿ ಬಿಡುಗಡೆಗೊಳ್ಳಲಿದೆ.
ಕನ್ನಡದಲ್ಲಿ ಸಂಬಂಧವನ್ನು ಬೆಸೆಯುವ ವಿಭಿನ್ನ ಕಥಾ ಹಂದರವಿರುವ, ಸಮಾಜಕ್ಕೆ ಉತ್ತಮ ಸಂದೇಶವಿರುವ, inspire ಚಿತ್ರತಂಡದ ಅಜ್ಜನಮಾಯೆ ಖ್ಯಾತಿಯ ರವಿಚಂದ್ರ ರೈ.ಬಿ ಮುಂಡೂರು ಕಥೆ-ಚಿತ್ರಕಥೆ-ನಿರ್ದೇಶನದ, ಕಾಂತಾರ ಖ್ಯಾತಿಯ ಚಲನಚಿತ್ರ ನಟ ಪ್ರಕಾಶ್ ಕೆ ತುಮಿನಾಡು ಅವರ ಸಲಹೆ ಸಹಕಾರವಿರುವ ಈ ಕಿರುಚಿತ್ರದಲ್ಲಿ ಪ್ರಕಾಶ್ ತುಮಿನಾಡು ಅವರ ಮಗ ಖುಷಿತ್ ತುಮಿನಾಡು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು ಚಿತ್ರಕ್ಕೆ ಸೂರಜ್ ಪಂಜಳರವರ ಕ್ಯಾಮರ ವರ್ಕ್, ಪ್ರಜ್ವಲ್ ಇವರ ಡ್ರೋನ್ ಕ್ಯಾಮರ, ರವಿ ಸಿಂಗೇರಿ ಹಾಗೂ ಅನುಪ್ತ ಶೆಟ್ಟಿ ಯವರ ಪ್ರಸಾದನ, ವಿಕ್ರಮ್ ನಾಯಕ್ ರವರ ಸಂಕಲನ, ಚೇತನ್ ಮೊಟ್ಟೆತಡ್ಕ ಅವರ ಸಾಹಿತ್ಯ, ದೀಪಕ್ ಆಚಾರಿ ಅವರ ಟೈಟಲ್, ವಿಜಯಶ್ರೀ ಮುಳಿಯ ರವರ ಗಾಯನ, ಸವಿ ಸಂಗೀತ ಸ್ಟುಡಿಯೋ ರವರ ಸಂಗೀತ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಧ್ವನಿ ಮುದ್ರಣ CAD Media ಮಂಗಳೂರು ಮಾಡಿದ್ದಾರೆ.
ಈ ಚಿತ್ರದಲ್ಲಿ ಹರೀಶ್ ಆಲಂಗಾಜೆ, ಡಿ.ಕೆ.ಶೇಷಪ್ಪ ಪೂಜಾರಿ ಪುರುಷರಕಟ್ಟೆ, ವಿಜಯ ಅತ್ತಾಜೆ, ರಮಿತಾ ರಾವ್, ಪ್ರವೀಣ್ ಮುಲಾರ್, ವೆಂಕಪ್ಪ ಬರೆಪಾಡಿ, ಜಗದೀಶ್.ಶೆಟ್ಟಿ ಕೆರೆಮೂಲೆ, ಉಮೇಶ್.ಎಸ್.ಕೆ, ಪ್ರತೀಕ್ ತುಮಿನಾಡು ಅಭಿನಯಿಸಿದ್ದಾರೆ. ಸುಶಾಂತ್ ಮರೀಲ್ ಇವರ ಸಹಕಾರದೊಂದಿಗೆ ಚಿತ್ರದ ಸಂಕಲನ ಕಾರ್ಯ ನಡೆಯುತಿದ್ದು ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ.

LEAVE A REPLY

Please enter your comment!
Please enter your name here