ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೌಹಾರ್ದ ಸ್ನೇಹ ಸಮ್ಮಿಲನ ಶುಭ ಯಾತ್ರೆ ಕಾರ್ಯಕ್ರಮ

0

ವಿಟ್ಲ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ವಿಟ್ಲದಲ್ಲಿರುವ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ. ರವರ ಅಧ್ಯಕ್ಷತೆಯಲ್ಲಿಉಮ್ರಾ ಯಾತ್ರಾರ್ಥಿಗಳಾದ ಮಾಜಿ ಜಿ.ಪಂ ಸದಸ್ಯರಾದ ಎಂ. ಎಸ್ . ಮೊಹಮ್ಮದ್ ಹಾಗೂ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಫಾರೂಕ್ ಪೆರ್ನೆ ಯವರಿಗೆ ‘ಸೌಹಾರ್ದ ಸ್ನೇಹ ಸಮ್ಮಿಲನ ಶುಭ ಯಾತ್ರೆ ‘ ಕಾರ್ಯಕ್ರಮ ಹಾಗೂ ವಿಧಾನಪರಿಷತ್ ನೈಋತ್ಯ ಪದವಿದರರ ಕ್ಷೇತ್ರದ ಚುನಾವಣೆಯ ಮತದಾರ ಪಟ್ಟಿ ಸೇರ್ಪಡೆ ಬಗ್ಗೆ ಜಾಗೃತಿ ಸಭೆ ನಡೆಯಿತು.

ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈರವರು ಗೌರವ ಉಪಸ್ಥಿತಿ ವಹಿಸಿದ್ದರು. ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಸ್ತಫಾ ಸುಳ್ಯ, ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಉಮನಾಥ್ ಶೆಟ್ಟಿ ಪೆರ್ನೆ,ಮುರಳೀಧರ್ ರೈ ಮಠಂದಬೆಟ್ಟು, ಪ್ರವೀಣ್ ಚಂದ್ರ ಆಳ್ವ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ಬ್ಲಾಕ್ ಉಸ್ತುವಾರಿ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ ಕೊಲ್ಯ,ವಿಟ್ಲ ಪಟ್ಟಣ ಪಂಚಾಯತ್ ಸದಸ್ಯರುಗಳಾದ ವಿ ಕೆ ಎಂ ಅಶ್ರಫ್,ವಿ ಅಬ್ಫುಲ್ ರಹಿಮಾನ್, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕರೀಂ ಕುದ್ದುಪದವು, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಎಲ್ಯಣ್ಣ ಪೂಜಾರಿ,ಪುತ್ತೂರು ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ರಾಮಣ್ಣ ಪಿಲಿಂಜ, ಜಿಲ್ಲಾ ಕಾಂಗ್ರೆಸ್ ಸದಸ್ಯ ರಮಾನಾಥ್ ವಿಟ್ಲ, ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್ ಬಾಳೆಕಲ್ಲು, ಪಕ್ಷದ ಪ್ರಮುಖರಾದ ಎಂ ಕೆ ಮುಸಾ,ಸುನಿತಾ ಕೋಟ್ಯಾನ್,ಶ್ರೀಧರ ಶೆಟ್ಟಿ ಪೂಣಚ, ಆದಂ ಕೆದುವಡ್ಕ,ಬಿಪಾತುಮ್ಮ,ಅಬ್ದುಲ್ ರಹಿಮಾನ್ ಕುರುಂಬಳ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಅಸ್ಮಾ,ಶೈಕ್ ಅಲಿ ಸೆರಾಜೆ,ಎಸ್ ಕೆ ಮೊಹಮ್ಮದ್ ವಿ ಎ ರಶೀದ್,ಅಶೋಕ ಎಂ ಎಸ್ ಡಿ,ಎಸ್ ಕೆ ಮೊಹಮ್ಮದ್,ಸಂತೋಷ್ ಕುಮಾರ್ ವಿಟ್ಲ, ಅಬ್ದುಲ್ ರಹಿಮಾನ್(ಅದ್ರು),ಅಬ್ಬು ನವಗ್ರಾಮ,ಚಿತ್ತರಂಜನ್ ಎನ್ ಎಸ್ ಡಿ,ರವಿ ಉಕ್ಕಡ,ಚಂದ್ರಹಾಸ ವಿಟ್ಲ,ಸುಧೀರ್ ಕೋಟ್ಯಾನ್,ಫ್ರಾನ್ಸಿಸ್ ಪೆರುವಾಯಿ,ಮುಸ್ತಾಕ್ ನವಗ್ರಾಮ,ಕರುಣಾಕರ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here