ಝೀ ಕನ್ನಡ ‘ಸರಿಗಮಪ ಸೀಸನ್ – 20’ ಗೆ ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆ – ಅ. 7 ರಿಂದ ಕಾರ್ಯಕ್ರಮ ಪ್ರಸಾರ

0

ಪುತ್ತೂರು: ರಾಜ್ಯದ ಪ್ರಮುಖ ಮನೋರಂಜನಾ ವಾಹಿನಿಯಾದ  ಝೀ ಕನ್ನಡ ವಾಹಿನಿ ನಡೆಸುತ್ತಿರುವ ‘ಸರಿಗಮಪ’ ಸೀಸನ್ – 20 ಸಂಗೀತ ಸ್ಪರ್ಧೆಯ ಮೆಗಾ ಅಡಿಷನ್ ನಲ್ಲಿ  ಪುತ್ತೂರಿನ ಸಮನ್ವಿ ರೈ ಮದಕ ಆಯ್ಕೆಯಾಗಿದ್ದಾರೆ. ಅಡಿಷನ್ ನಲ್ಲಿ ದೇಶವಿದೇಶಗಳ ಸುಮಾರು ಲಕ್ಷಕ್ಕೂ‌ ಮಿಕ್ಕಿ ಸ್ಪರ್ಧಿಗಳ ಪೈಕಿ ಮೆಗಾ ಅಡಿಷನ್ ಗೆ 40 ಮಂದಿ ಆಯ್ಕೆಯಾಗಿದ್ದರು. ಅದರಲ್ಲಿ ಅಂತಿಮ ಸ್ಪರ್ಧೆಗೆ 20 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಸಮನ್ವಿ ರೈಯವರು ಓರ್ವರಾಗಿದ್ದಾರೆ.

ಅ. 7 ರ ರಾತ್ರಿ ಕಾರ್ಯಕ್ರಮ ಪ್ರಸಾರ
ಮೆಗಾ ಅಡಿಷನ್ ನ ಎಪಿಸೋಡ್ ಅ. 7 ರಂದು ಆರಂಭವಾಗಲಿದ್ದು ರಾತ್ರಿ 7.30 ಕ್ಕೆ ಝೀ‌ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ.
ಸಮನ್ವಿ ರೈಯವರು ವಿದ್ವಾನ್ ದಿ. ಕಾಂಚನ ನಾರಾಯಣ ಭಟ್ ಮತ್ತು ವಿದುಷಿ‌ ವೀಣಾ ರಾಘವೇಂದ್ರ ರವರಿಂದ ತರಬೇತಿ ಪಡೆದಿರುತ್ತಾರೆ. ಖ್ಯಾತ ಸಂಗೀತ ಗಾಯಕ ಪುತ್ತೂರು ಜಗದೀಶ್ ಆಚಾರ್ಯರವರ ಸಂಗೀತ ತಂಡದ ಕಲಾವಿದೆಯಾಗಿರುವ ಈಕೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅರುಣ್ ಪ್ರಕಾಶ್ ರೈ ಮದಕ ಮತ್ತು ಸವಿತಾ ಎ. ರೈ ದಂಪತಿಯ ಪುತ್ರಿಯಾಗಿದ್ದಾರೆ.

LEAVE A REPLY

Please enter your comment!
Please enter your name here