ಕಡಬದಲ್ಲಿ ನವೀಕರಣಗೊಂಡು ಸಾನಿಕ ನರ್ಸರಿ ಶುಭಾರಂಭ

0

ಕಡಬ: ಪಂಜ ಚೀಮುಳ್ಳು ವನಸಿರಿ ಫಾರ್ಮ್ಸ್ ಮತ್ತು ಸಾನಿಕ ನರ್ಸರಿ ಇದರ ಸಹ ಸಂಸ್ಥೆ ಸಾನಿಕ ನರ್ಸರಿ ಕಡಬ ಅನುಗ್ರಹ ಸಭಾಭವನದ ಎದುರು ಅ.15ರಂದು ಶುಭಾರಂಭಗೊಂಡಿತು.

ಕಡಬ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಭಟ್ ಕಲ್ಪುರೆ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿ‌, ನರ್ಸರಿ ಕ್ಷೇತ್ರದಲ್ಲಿ ವಿಶೇಷ ಅನುಭವವುಳ್ಳ ದಯಪ್ರಸಾದ್ ಅವರ ವ್ಯವಹಾರವು ಬಹಳ ವಿಶ್ವಾರ್ಹವಾಗಿದೆ. ಈ ಉದ್ಯಮವು ಯಶಸ್ವಿಯಾಗಿ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.

ಉದ್ಯಮಿ ಅಜಿತ್ ಶೆಟ್ಟಿ ಕಡಬ, ಜೋಸ್ ಕೆ.ಜೆ, ನಾರಾಯಣ ಗೌಡ ಚೀಮುಳ್ಳು ಅವರುಗಳು ಮಾತನಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಎಸ್.ಪಿ. ಲೋಕನಾಥ, ಎಸ್.ಪಿ. ಮುರಳೀಧರ್ ಕೆಮ್ಮಾರ, ರಾಮಚಂದ್ರ ಭಟ್, ತುಳಸಿ ಚೀಮುಳ್ಳು, ತಾರಾ, ಯಶೋಧ ಅವರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ದಯಾಪ್ರಸಾದ್ ಮಾತನಾಡಿ, ನಮ್ಮ ನರ್ಸರಿಯಲ್ಲಿ ಉತ್ತಮ ಗುಣಮಟ್ಟದ ದೇಶ ವಿದೇಶದ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು ಹಾಗೂ ತೋಟಗಾರಿಕಾ ಗಿಡಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯಲಿದೆ ಎಲ್ಲರು ಸಹಕರಿಸಬೇಕು ಎಂದು ಹೇಳಿ ವಂದನಾರ್ಪನೆ ಸಲ್ಲಿಸಿದರು. ಸಾನಿಕ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here