![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕಾವು 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಅ 20ರಂದು ಪುರೋಹಿತರಾದ ಶಿವಪ್ರಸಾದ್ ಕಡಮಣ್ಣಾಯವರ ಪೌರೋಹಿತ್ಯದಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಯಿತು.
ಸನ್ಮಾನ
ಕಾವು ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಸುಬ್ರಹ್ಮಣ್ಯ ಉಪವಿಭಾಗದ ಸೇವಾ ಕೇಂದ್ರಕ್ಕೆ ಪದೋನ್ನತಿ ಹೊಂದಿ ಕಿರಿಯ ಇಂಜಿನಿಯರ್ ಆಗಿ ವರ್ಗಾವಣೆ ಗೊಂಡಿರುವ ಬಾಲಕೃಷ್ಣ ಗೌಡ ಎನ್.ಪಿ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
![](https://puttur.suddinews.com/wp-content/uploads/2023/10/fd924904-702c-4aa3-8bf8-ed6744d172c1.jpg)
ಈ ಸಂದರ್ಭದಲ್ಲಿ ಪುತ್ತೂರು ವಿದ್ಯುತ್ ಉಪ ಕೇಂದ್ರಗಳ ನೋಡೆಲ್ ಸಹಾಯ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥಯ್ಯ, ಕಿರಿಯ ಇಂಜಿನಿಯರ್ ಯೋಗೀಶ್,ಕಾವು ವಿದ್ಯುತ್ ವಿತರಣಾ ಕೇಂದ್ರದ ಕಿರಿಯ ಇಂಜಿನಿಯರ್ ಉಷಾ ಎಸ್ , ಆಪರೇಟ್ ರು ಗಳಾದ ರಾಮಚಂದ್ರ ಗೌಡ, ಹರೀಶ್ ಪಿ ಮತ್ತು ಮನೋಜ್, ಪವರ್ ಮ್ಯಾನ್ ಗಳಾದ ರಾಜೇಂದ್ರ ಕೆ, ಶ್ರೀಧರ್, ಮತ್ತು ಸತೀಶ್ ಬಿ ಮುಂತಾದವರು ಉಪಸ್ಥಿತರಿದ್ದರು.