ಕಡಬ ಪ.ಪಂ. ಮುಖ್ಯಾಧಿಕಾರಿಯಾಗಿ ಲೀಲಾವತಿ ಅಧಿಕಾರ ಸ್ವೀಕಾರ

0

ಕಡಬ: ಇಲ್ಲಿನ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಪಕೀರ ಮೂಲ್ಯ ಅವರು ಪುತ್ತೂರು ನಗರಸಭೆಯ ಕಂದಾಯ ಅಧಿಕಾರಿಯಾಗಿ ನೇಮಕಗೊಂಡು ವರ್ಗಾವಣೆಗೊಂಡಿದ್ದಾರೆ. ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ಚಿತ್ರದುರ್ಗದ ಮೊಳಕಾಲ್ಮೂರು ಪಟ್ಟಣ ಪಂಚಾಯತ್‌ನಲ್ಲಿ ಮುಖ್ಯಾಧಿಕಾರಿಯಾಗಿದ್ದ ಲೀಲಾವತಿ ಅವರು ಅಧಿಕಾರ ಸ್ವೀಕರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಲೀಲಾವತಿ ಬಂಟ್ವಾಳ ಪುರಸಭೆಯಲ್ಲಿ ಮ್ಯಾನೇಜರ್ ಆಗಿ ಚಿತ್ರದುರ್ಗದ ಮೊಳಕಾಲ್ಮೂರು ಪಟ್ಟಣ ಪಂಚಾಯತ್ ನಲ್ಲಿ ಮುಖ್ಯಾಧಿಕಾರಿಯಾಗಿ, ಉಳ್ಳಾಲ ಪುರ ಸಭೆಯಲ್ಲಿಯೂ ಅಧಿಕಾರಿಯಾಗಿ ಒಟ್ಟು ಹತ್ತು ವರ್ಷಗಳ ಸೇವಾನುಭವ ಹೊಂದಿದ್ದಾರೆ. ಇವರು ಮೂಲತಃ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಗಾಂದೋಡಿಯವರು.
ಪುತ್ತೂರು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಕೀರ ಮೂಲ್ಯ ಅವರು ಕಂದಾಯ ಅಧಿಕಾರಿಯಾಗಿ ಭಡ್ತಿ ಹೊಂದಿದ್ದರು. ಬಳಿಕ 2021 ಡಿಸೆಂಬರ್ 21 ರಂದು ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿ ನಿಯೋಜನೆಗೊಂಡಿದ್ದರು. ಇದೀಗ ಮುಖ್ಯಾಧಿಕಾರಿ ಹುದ್ದೆಗೆ ಲೀಲಾವತಿ ನೇಮಕಗೊಂಡಿದ್ದಾರೆ. ಪಕೀರ ಮೂಲ್ಯ ಅವರು ಪುತ್ತೂರು ನಗರಸಭೆಯಲ್ಲಿ ಕಂದಾಯ ಅಧಿಕಾರಿಯಾಗಿ ಮುಂದುವರಿಯಲಿದ್ದಾರೆ.

LEAVE A REPLY

Please enter your comment!
Please enter your name here