ಬೆಳಂದೂರು: ಸಿಡಿಲು ಬಡಿದು ಮನೆ, ವಿದ್ಯುತ್‌ ಪರಿಕರಗಳಿಗೆ ಹಾನಿ

0

ಕಾಣಿಯೂರು: ಬೆಳಂದೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯುಂಟಾಗಿ ನಷ್ಟ ಸಂಭವಿಸಿದ ಘಟನೆ ನಡೆದಿದೆ.

ಅ.29ರಂದು ಸಂಜೆ ಸುರಿದ ಬಾರಿ ಗಾಳಿ, ಮಳೆ ಸಹಿತ ಸಿಡಿಲಿನಿಂದಾಗಿ ಬೆಳಂದೂರು ಕೊಡೆಂಕೇರಿ ಮಹಾಬಲ ಗೌಡ ಅವರ ತಾರಸಿ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್‌ ಸಂಪರ್ಕ, ವಯರಿಂಗ್‌ ಸಹಿತ ಹಾನಿಯುಂಟಾಗಿದೆ. ಘಟನಾ ಸ್ಥಳಕ್ಕೆ ಬೆಳಂದೂರು ಗ್ರಾಮಕರಣಿಕರು ಭೇಟಿ ಪರಿಶೀಲನೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here