ಬಡಗನ್ನೂರು: ಮನೆಯ ಕೊಟ್ಟಿಗೆಯಲ್ಲಿದ್ದ ಅಡಿಕೆ ಕಳವು ಪ್ರಕರಣ- ಆರೋಪಿಗಳು ಪೊಲೀಸ್ ವಶಕ್ಕೆ !

0

ಪುತ್ತೂರು: ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿನ ಮನೆಯ ಕೊಟ್ಟಿಗೆಯಲ್ಲಿ ಗೋಣಿಯಲ್ಲಿ ತುಂಬಿಸಿಟ್ಟಿದ್ದ ಸುಮಾರು 460 ಕೆ.ಜಿ ಸುಲಿದ ಅಡಿಕೆ ಕಳವಾಗಿರುವ ಘಟನೆಗೆ ಸಂಬಂಧಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


ಬಡಗನ್ನೂರು ಕೊಯಿಲಾ ನಿವಾಸಿ ನವೀನ್ ಕುಮಾರ್ ರೈ ಎಂಬವರ ಹಳೆಯ ಮನೆಯ ಸಮೀಪದ ಕೊಟ್ಟಿಗೆಯ ಆಟ್ಟದಲ್ಲಿ ಎನ್.ಆರ್.ಕೆ.ಎಂದು ಮಾರ್ಕ್ ಮಾಡಿದ ಗೋಣಿಗಳಲ್ಲಿ ತುಂಬಿಸಿಟ್ಟ ಸುಮಾರು 460 ಕೆ.ಜಿ ಸುಲಿದ ಅಡಿಕೆ ಕಳವಾಗಿರುವ ಕುರಿತು ಅ.26ರಂದು ಬೆಳಕಿಗೆ ಬಂದಿತ್ತು. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here