ಜಾವೆಲಿನ್ ತ್ರೋ: ಉದನೆ ಸಂತ ಅಂತೋನಿಸ್ ಪ್ರೌಢಶಾಲೆಯ ಹರ್ಷ ಜಿಲ್ಲಾಮಟ್ಟಕ್ಕೆ ಆಯ್ಕೆ

0

ನೆಲ್ಯಾಡಿ: ಶಾಲಾ ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಹಾಗೂ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ಆಶ್ರಯದಲ್ಲಿ ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆಯ ನೂತನ ಕ್ರೀಡಾಂಗಣದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದ 17ರ ವಯೋಮಾನದ ಬಾಲಕಿಯರ ವಿಭಾಗದ ಜಾವಲಿನ್ ಎಸೆತದಲ್ಲಿ ಉದನೆ ಸಂತ ಅಂತೋನಿಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಹರ್ಷರವರು ದ್ವಿತೀಯ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಶ್ ರೈ.ಎಸ್.ಮತ್ತು ಜಿಮ್‌ಸನ್‌ರವರು ತರಬೇತಿ ನೀಡಿದ್ದಾರೆ. ಶಾಲಾ ಸಂಚಾಲಕ ಹನಿಜೇಕಬ್, ಮುಖ್ಯಗುರು ಶ್ರೀಧರ ಗೌಡ ಮತ್ತು ಶಿಕ್ಷಕ,ಶಿಕ್ಷಕೇತರ ವೃಂದದವರು ಸಹಕರಿಸಿದ್ದಾರೆ. ಈಕೆ ಉದನೆ ನಿವಾಸಿ ಬಾಲಕೃಷ್ಣ ಗೌಡ ಹಾಗೂ ಲೀಲಾವತಿ ಅವರ ಪುತ್ರಿ

LEAVE A REPLY

Please enter your comment!
Please enter your name here