ನಿಡ್ಪಳ್ಳಿ ತಂಬುತ್ತಡ್ಕ ನವಜ್ಯೋತಿ ಯುವಕ ಮಂಡಲದ ವಾರ್ಷಿಕ ಮಹಾಸಭೆ

0

ಪುತ್ತೂರು: ನಿಡ್ಪಳ್ಳಿ ತಂಬುತ್ತಡ್ಕ ನವಜ್ಯೋತಿ ಯುವಕ ಮಂಡಲದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಸಂಶೀರ್ ಎನ್.ಎ.ಕೆರವರ ನೇತೃತ್ವದಲ್ಲಿ ಅ.25ರಂದು ಯುವಕ ಮಂಡಲದ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ 2023-24ರ ನೂತನ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ವಿಜಿತ್ ಕುಮಾರ್ ದೇವಸ್ಯ, ಉಪಾಧ್ಯಕ್ಷರಾಗಿ ರಾಮಚಂದ್ರ ಮಣಿಯಾಣಿ ಹಾಗೂ ಹರೀಶ್ ಪೂಜಾರಿ ಹೊಸಮನೆ, ಕಾರ್ಯದರ್ಶಿಯಾಗಿ ಸಿದ್ದಿಕ್ ತಂಬುತ್ತಡ್ಕ, ಕೋಶಾಧಿಕಾರಿಯಾಗಿ ಸುರೇಶ್ ಗೌಡ ಸಾರೆಪ್ಪಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಶಫೀಕ್ ಕರ್ನಪ್ಪಾಡಿ ಹಾಗು ಕಾರ್ಯಕಾರಿಣಿ ಸದಸ್ಯರಾಗಿ ಆಸೀಪ್ ತಂಬುತ್ತಡ್ಕ, ಅಝೀಝ್ ಟಿ.ಎಂ, ಪ್ರಸಾದ್ ಕುಮಾರ್ ಹೊಸಮನೆ, ಪ್ರಸಾದ್ ರೈ ಹೊಸಮನೆ, ಸಂಸೀರ್ ಎನ್.ಎ.ಕೆ, ದಿನೇಶ್ ಕರ್ನಪ್ಪಾಡಿ, ಸುಭಾಷ್ ಕಾನ, ಭಾಸ್ಕರ ಕರ್ಕೇರ, ಬಾಲಚಂದ್ರ ಮಣಿಯಾಣಿ, ರವಿ ಡ್ರೈವರ್‌, ತಾರನಾಥ ನುಳಿಯಾಲು, ಸಫವಾನ್ ಎಂಪೆಕಲ್ಲುರವರು ಸರ್ವಾನುಮತದಿಂದ ಆಯ್ಕೆಯಾದರು. ಸಭೆಯಲ್ಲಿ ದ.09 ರಂದು ಮುರಳಿಕೃಷ್ಣ ಭಟ್ ಮುಂಡೂರುರವರ ಸ್ಮರಣಾರ್ಥ ಪುರುಷರ ಮುಕ್ತ ಮತ್ತು 55 ಕೆ.ಜಿ ವಿಭಾಗದ ಹಾಗೂ ವಲಯ ಮಟ್ಟದ ಕಬಡ್ಡಿ ಮಾಡುವುದೆಂದು ತೀರ್ಮಾನಿಸಲಾಯಿತು. ಯುವಕ ಮಂಡಲದ ಸದಸ್ಯ ಆಸೀಪ್ ತಂಬುತ್ತಡ್ಕ ಸ್ವಾಗತಿಸಿ, ಅಝೀಝ್ ಟಿ.ಎಂ ವಂದಿಸಿದರು.

LEAVE A REPLY

Please enter your comment!
Please enter your name here