ಡಿ.30: ಪರ್ಪುಂಜ ರಾಮಜಾಲು ಗರಡಿ ಜಾತ್ರೋತ್ಸವ, ಪೂರ್ವಭಾವಿ ಸಭೆ

0

ಪುತ್ತೂರು: ತುಳುನಾಡಿನ ಅತ್ಯಂತ ಕಾರಣಿಕತೆಯನ್ನು ಹೊಂದಿರುವ ಗರಡಿಗಳಲ್ಲಿ ಒಂದಾಗಿರುವ ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ರಾಮಜಾಲು ಶ್ರೀ ಬ್ರಹ್ಮಬೈದೇರ್ಕಳ ಗರಡಿಯಲ್ಲಿ 16ನೇ ವರ್ಷದ ಷಷ್ಠದಶ ಸಂಭ್ರಮದ ರಾಮಜಾಲು ಗರಡಿ ವೈಭವದ ಜಾತ್ರೋತ್ಸವವು ಡಿ.30 ರಂದು ನಡೆಯಲಿದ್ದು ಇದರ ಪೂರ್ವಭಾವಿ ಸಭೆಯು ನ.12 ರಂದು ಗರಡಿ ವಠಾರದಲ್ಲಿ ನಡೆಯಿತು.

ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಭಕ್ತಾಧಿಗಳನ್ನು ಸ್ವಾಗತಿಸಿ, ಮಾಹಿತಿ ನೀಡುತ್ತಾ, ಪ್ರತಿವರ್ಷದಂತೆ ಈ ವರ್ಷ ಡಿ.30 ರಂದು ರಾಮಜಾಲು ಗರಡಿ ಜಾತ್ರೋತ್ಸವವು ವೈಭವದಿಂದ ನಡೆಯಲಿದೆ. ಜಾತ್ರೋತ್ಸವದ ಅಂಗವಾಗಿ ಕೋಟಿ ಚೆನ್ನಯರಿಗೆ ಬೆಳಿಗ್ಗೆ ನಡೆಯುವ ಪೂಜೆ ಪುನಸ್ಕಾರ, ಪರ್ವಗಳು, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಭಂಡಾರ ಇಳಿಯುವ ಕಾರ್ಯಕ್ರಮ, ರಾತ್ರಿ ವೈಭವದ ನೇಮೋತ್ಸವ ನಡೆಯಲಿದೆ. ಪ್ರತಿವರ್ಷದಂತೆ ಈ ವರ್ಷವೂ ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದ್ದು ಇದರ ಸಿದ್ಧತೆಗಳ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಗಿದೆ.

ಹಲವು ಕಾರಣಿಕತೆಗಳನ್ನು ಹೊಂದಿರುವ ರಾಮಜಾಲು ಗರಡಿಯಲ್ಲಿ ಪ್ರತಿ ವರ್ಷವೂ ಸುಮಾರು 5 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಈ ವರ್ಷ ರಾತ್ರಿ 9 ಗಂಟೆಗೆ ಕೋಟಿ ಚೆನ್ನಯರು ಗರಡಿ ಇಳಿಯುವ ಕಾರ್ಯಕ್ರಮ ಬಳಿಕ ಮಾಣಿಬಾಲೆ ಮಾಯಂದಾಳು ಗರಡಿ ಇಳಿಯುವ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ದೇವದಾಸ್ ಕಾಪಿಕಾಡ್ ಸಾರಥ್ಯದಲ್ಲಿ ಹಲವು ಕಲಾವಿದರ ಕೂಡುವಿಕೆಯಲ್ಲಿ ಪುದರ್ ದೀತಾಂಡ್’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ. ಸಂಜೆ 7 ಗಂಟೆಯ ಬಳಿಕ ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಊರಪರವೂರ ಭಕ್ತರ, ಸ್ವಯಂ ಸೇವಕರ ಸಹಕಾರದಿಂದ ರಾಮಜಾಲು ಗರಡಿ ಜಾತ್ರೋತ್ಸವವು ವೈಭವದಿಂದ ನಡೆಯಲು ಸಾಧ್ಯವಾಗಿದೆ. ಈ ವರ್ಷವೂ ಸರ್ವರ ಸಹಕಾರವನ್ನು ಬಯಸುತ್ತಿದ್ದೇವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಕೋಟಿ ಚೆನ್ನಯರ ಕೃಪೆಗೆ ಪಾತ್ರರಾಗುವಂತೆ ಸಂಜೀವ ಪೂಜಾರಿ ಕೂರೇಲುರವರು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಪ್ರೇಮ್‌ರಾಜ್ ರೈ ಪರ್ಪುಂಜ, ಕೋರೇಲು ಗೋವಿಂದ ಪೂಜಾರಿ, ಡಾ. ನವೀನ್ ಮರಿಕೆ, ರಾಜೇಶ್ ರೈ ಪರ್ಪುಂಜ, ರವೀಂದ್ರ ಸಂಪ್ಯ, ವಿಠಲ ಗೌಡ ಶಿಬರಿಗುರಿ, ವಿಶ್ವನಾಥ ಪೂಜಾರಿ ಕೂರೇಲು, ಜನಾರ್ದನ ಅಡ್ಯಾರ್, ರಮೇಶ ಮಾಣಿಜಾಲು, ಹರ್ಷಿತ್ ಕೂರೇಲು ಅಲ್ಲದೆ ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಯುವತಿ ಮಂಡಲದ ಅಧ್ಯಕ್ಷರು ಮತ್ತು ಸರ್ವ ಸದಸ್ಯರುಗಳು, ಕೂರೇಲು ಶ್ರೀ ಮಲರಾಯ ಸ್ವಯಂ ಸೇವಕ ವೃಂದದ ಸದಸ್ಯರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ನೇಮಾಕ್ಷ ಸುವರ್ಣ ವಂದಿಸಿದರು.

ಪ್ರತಿವರ್ಷದಂತೆ ಈ ವರ್ಷವೂ ವೈಭವದ ಶ್ರೀ ಕೋಟಿ ಚೆನ್ನಯರ ಗರಡಿ ಜಾತ್ರೋತ್ಸವ, ಸುಮಾರು 10 ಸಾವಿರಕ್ಕಿಂತಲೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸುಮಾರು 5 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಮಹಾ ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ದೇವದಾಸ್ ಕಾಫಿಕಾಡ್ ವಿರಚಿತಪುದರ್ ದೀತಾಂಡ್’ ತುಳು ನಾಟಕ ನಡೆಯಲಿದೆ.

ರಾಮಜಾಲು ಗರಡಿಯ 16ನೇ ವರ್ಷದ ಜಾತ್ರೋತ್ಸವವು ಡಿ.30 ರಂದು ನಡೆಯಲಿದ್ದು ಸರ್ವರ ಸಹಕಾರದಿಂದ ತಾಲೂಕಿನಲ್ಲೇ ಅದ್ದೂರಿ ನೇಮೋತ್ಸವ ಎಂಬ ಪ್ರಸಿದ್ದಿಯನ್ನು ಪಡೆದುಕೊಂಡಿದೆ. ಈ ವರ್ಷದ ನೇಮೋತ್ಸವದಲ್ಲಿಯೂ ಸಮಸ್ತ ಭಕ್ತಾಧಿಗಳು ಪಾಲ್ಗೊಂಡು ನೇಮೋತ್ಸವವನ್ನು ಚಂದಗಾಣಿಸಿಕೊಡಬೇಕಾಗಿ ಪರ್ಪುಂಜ ಶ್ರೀ ರಾಮಜಾಲು ಗರಡಿ ಎಂದು ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here