ಕೂಡುರಸ್ತೆ ರಿಫಾಯಿಯ್ಯ ಜುಮಾ ಮಸೀದಿ ಅಧ್ಯಕ್ಷರಾಗಿ ಮಜೀದ್ ಬಾಳಾಯ, ಪ್ರ.ಕಾರ್ಯದರ್ಶಿಯಾಗಿ ಹನೀಫ್ ಕೂಡುರಸ್ತೆ

0

ಪುತ್ತೂರು: ರಿಫಾಯಿಯ್ಯ ಜುಮಾ ಮಸೀದಿ ಕೂಡುರಸ್ತೆ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಬಾಳಾಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹನೀಫ್ ಕೂಡುರಸ್ತೆ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಪಿ.ಕೆ ಮಹಮ್ಮದ್, ಉಪಾಧ್ಯಕ್ಷರಾಗಿ ಇಬ್ರಾಹಿಂ ಅಜ್ಜಿಕ್ಕಲ್, ಕಾರ್ಯದರ್ಶಿಯಾಗಿ ಉಮ್ಮರ್ ಬಾಳಾಯ ಆಯ್ಕೆಯಾಗಿದ್ದಾರೆ.

ಜಮಾಅತ್ ಕಮಿಟಿ ಗೌರವಾಧ್ಯಕ್ಷರಾದ ಮಾಹಿನ್ ಹಾಜಿ ಬಾಳಾಯ ಅಧ್ಯಕ್ಷತೆಯಲ್ಲಿ ನಡೆದ ಜಮಾಅತ್ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಸಮಿತಿ ಸದಸ್ಯರುಗಳಾಗಿ ಮಾಹಿನ್ ಹಾಜಿ ಬಾಳಾಯ, ಇಸ್ಮಾಯಿಲ್ ದರ್ಬೆ, ಮೂಸಾ ಹಾಜಿ, ಯುಸುಫ್ ಎ, ಇಸ್ಮಾಯಿಲ್ ಎ, ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಶರೀಫ್ ಎಲಿಯ, ಅಬೂಬಕ್ಕರ್ ಕೆ, ಅಬ್ಬಾಸ್ ಹಾಜಿ, ಅಬ್ದುಲ್ ಖಾದರ್ ಎ, ಮೊಯಿದುಕುಂಞ ಕೆ, ಅಬೂಬಕ್ಕರ್ ಬೆಳ್ಳಾರೆ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕೂಡುರಸ್ತೆ ಮಸೀದಿಯ ಖತೀಬ್ ಬದ್ರುದ್ದೀನ್ ರಹ್ಮಾನಿ, ಸದರ್ ಇಕ್ಬಾಲ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here