ಕಡಬ: ದುರ್ಗಾಂಬಾ ಎಂಟರ್‌ಪ್ರೈಸಸ್‌ನಲ್ಲಿ ದೀಪೋತ್ಸವ ಸಾಧಕರಿಗೆ ಸನ್ಮಾನ-ಅಶಕ್ತರಿಗೆ ನೆರವು

0

ಕಡಬ: ಮೊಬೈಲ್ ಮಾರಾಟ ಮಳಿಗೆ ದುರ್ಗಾಂಬಾ ಎಂಟರ್‌ಪ್ರೈಸಸ್‌ನ ಮಾಲಕ ದಯಾನಂದ ಆರಿಗ ಉದ್ಯಮದ ಜತೆಗೆ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ದೀಪಾವಳಿ ಪ್ರಯುಕ್ತ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಅಶಕ್ತರಿಗೆ ನೆರವು ನೀಡಲಾಯಿತು.

ಕುಂತೂರು ಪದವು ನಿವಾಸಿ, ಜೀ ಕನ್ನಡ ಕಾಮಿಡಿ ಕಿಲಾಡಿ ಸೀಸನ್ 4ರ ಕಲಾವಿದ ದೀಕ್ಷಿತ್ ಗೌಡ ಮತ್ತು ಕಡಬ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ, ಬಂಟ್ರ ಗ್ರಾಮದ ಬಸವಪಾಲು ನಿವಾಸಿ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಚರಿಷ್ಮಾ ಹಾಗೂ ಕರಾಟೆ ಪಟು, 102 ನೆಕ್ಕಿಲಾಡಿ ಗ್ರಾಮದ ನಿವಾಸಿ, ಕಡಬ ಸರಸ್ವತಿ ಶಾಲೆಯ ವಿದ್ಯಾರ್ಥಿ ನಿಶ್ವಿತ್ ಪಿ.ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅನಾರೋಗ್ಯ ಪೀಡಿತ ಅಶಕ್ತರಿಗೂ ನೆರವಿನ ಹಸ್ತ ನೀಡಲಾಯಿತು.

LEAVE A REPLY

Please enter your comment!
Please enter your name here