ಜೇಕಾಂ ಪುತ್ತೂರು ವತಿಯಿಂದ ಸದಸ್ಯರ ಸಿಬ್ಬಂದಿಗಳಿಗೆ ವ್ಯಕ್ತಿತ್ವ ವಿಕಸನ‌ ಕಾರ್ಯಗಾರ

0

ಪುತ್ತೂರು :- ಸಿಬ್ಬಂದಿಗಳು ಗ್ರಾಹಕ ಸೇವೆಯನ್ನು ಯಾವ ರೀತಿಯಲ್ಲಿ ನೀಡಬೇಕು ತನ್ನ ಸಂಸ್ಥೆಯಲ್ಲಿ ತನ್ನ ಸೇವೆಯ ಪಾತ್ರ ಇತ್ಯಾದಿ ವಿಷಯಗಳ ಮೇಲೆ ಜೇಕಾಂ ಪುತ್ತೂರು ವತಿಯಿಂದ ಸದಸ್ಯರ ಸಿಬ್ಬಂದಿಗಳಿಗೆ ಒಂದು ದಿನದ ವ್ಯಕ್ತಿತ್ವ ವಿಕಸನ‌ ಕಾರ್ಯಗಾರ ನಡೆಯಿತು.


ಮುಖ್ಯ ತರಬೇತುದಾರರಾಗಿ ಜೇಸಿಐ ಪ್ರೈಮ್ ಸತ್ತೀಶ್ ಭಟ್ ಬಿಳಿನೆಲೆ ಸಹತರಬೇತುದಾರರಾಗಿ ಜೇಸಿ ದೀಪಕ್ ರಾಜ್ ಸಿಬ್ಬಂದಿಗಳಿಗೆ ಕಛೇರಿ ಮತ್ತು ಸಂಸ್ಥೆಯಲ್ಲಿ ತಮ್ಮ ಜವಾಬ್ದಾರಿಗಳು ಗ್ರಾಹಕರೊಂದಿಗೆ ವ್ಯವಹರಿಸುವ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನೂಪ್ ಕೆ. ಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಜೇಕಾಂ ವಲಯ ಚೇರ್ಮನ್ ಶಶಿರಾಜ್ ರೈ,ಕಾರ್ಯದರ್ಶಿ ಮಾಲಿನಿ ಕಶ್ಯಪ್, ಪಶುಪತಿ ಶರ್ಮ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here