ಆತೂರು: ಮನೆಯಿಂದ ಲಕ್ಷಾಂತರ ರೂ.ಮೌಲ್ಯದ ಚಿನ್ನ, ನಗದು ಕಳ್ಳತನ

0

ರಾಮಕುಂಜ: ಕೊಯಿಲ ಗ್ರಾಮದ ಕಲಾಯಿ ನಿವಾಸಿ ಯಾಕುಬು ಎಂಬವರ ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ರೂ. ಕಳವುಗೊಂಡಿರುವ ಘಟನೆ ಜ.4ರಂದು ರಾತ್ರಿ ನಡೆದಿದೆ.
ಯಾಕುಬು ಹಾಗೂ ಅವರ ಮನೆಯವರೆಲ್ಲರೂ ಜ 4 ರಂದು ರಾತ್ರಿ ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದ ದ್ಸಿಕ್ರ್ ಹಲ್ಕಾ ಕಾರ್ಯಕ್ರಮಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ಕಳ್ಳತನ ನಡೆದಿದೆ. ಯಾಕುಬು ಅವರ ಮನೆಯ ಬಾಗಿಲು ತೆರೆದು ಕೊಂಡಿರುವುದನ್ನು ಗಮನಿಸಿದ ರಿಕ್ಷಾ ಚಾಲಕರೋರ್ವರು ಯಾಕೂಬು ಅವರಿಗೆ ಮಾಹಿತಿ ನೀಡಿದ್ದು ಅವರು ಬಂದು ಪರಿಶೀಲನೆ ನಡೆಸಿದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಪಾಟಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 3 ಲಕ್ಷ ರೂಪಾಯಿ ಕಳವು ಗೊಂಡಿದೆ ಎಂದು ವರದಿಯಾಗಿದೆ. ಇವರ ಮನೆಯ ಪಕ್ಕದಲ್ಲಿರುವ ಸಹೋದರ ಅಬ್ದುಲ್ ಕುಂಞಿ ಅವರ ಮನೆಯ ಬಾಗಿಲು ಮುರಿದು ಮನೆಯೊಳಗೆ ಕಪಾಟು ತುಂಬಾ ಜಾಲಾಡಿದ್ದು, ಯಾವುದೇ ಸೊತ್ತು ಕಳವುಗೊಂಡಿಲ್ಲ ಎಂದು ತಿಳಿದು ಬಂದಿದೆ. ತಡರಾತ್ರಿಯೇ ಕಡಬ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರೇ ಈ ಕೃತ್ಯ ಎಸರಗಿರಬಹುದು ಎಂದು ಶಂಕಿಸಲಾಗಿದೆ

LEAVE A REPLY

Please enter your comment!
Please enter your name here