ಶಾಂತಿನಗರ ಕುಶಾಲಪ್ಪ ಪೂಜಾರಿ ಹೃದಯಾಘಾತದಿಂದ ನಿಧನ

0

ಪುತ್ತೂರು: ಕೋಡಿಂಬಾಡಿ ಗ್ರಾಮದ ಶಾಂತಿನಗರ ನಿವಾಸಿ ಕಾರ್ಮಿಕರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಜ.16 ರಂದು ರಾತ್ರಿ ನಡೆದಿದೆ.
ಕೋಡಿಂಬಾಡಿ ಗ್ರಾ.ಪಂ ಮಾಜಿ ಸದಸ್ಯೆ ಯಮುನಾ ಅವರ ಪತಿ ಕುಶಾಲಪ್ಪ ಪೂಜಾರಿ (61ವ.) ಮೃತಪಟ್ಟವರು.

ಅವರು ಮನೆಯಲ್ಲಿ ರಾತ್ರಿ ಅಸ್ವಸ್ಥಗೊಂಡಿದ್ದರು. ತಕ್ಷಣ ಅಟೋ ರಿಕ್ಷಾವೊಂದರಲ್ಲಿ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರಾದರೂ ಆಗಲೇ ಅವರು ಮೃತಪಟ್ಟಿದ್ದರು. ಮೃತ ಕುಶಾಲಪ್ಪ ಪೂಜಾರಿ ಅವರು ಪುತ್ರಿ ನಮಿತಾ, ಅಳಿಯ ಭಾಸ್ಕರ ಪೂಜಾರಿ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here