ಕೆಯ್ಯೂರು ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕೆಪಿಎಲ್ ಸೀಸನ್-3 ಕ್ರಿಕೆಟ್ ಪಂದ್ಯಾಟ ಉದ್ಘಾಟನಾ ಸಮಾರಂಭ

0

ಕೆಯ್ಯೂರು:  ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಇದರ ವತಿಯಿಂದ ಕೆಪಿಎಲ್ ಸೀಸನ್ – 3 ಕ್ರಿಕೆಟ್ ಪಂದ್ಯಾಟ  ಜ.26ರಂದು ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರಿನಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ತಿಮಪ್ಪ ಪೂಜಾರಿ ಕಣಿಯಾರು ದೀಪ ಪ್ರಜ್ವಲಿಸುವ ಮೂಲಕ ಉಧ್ಘಾಟಿಸಿ, ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ವಿಶೇಷ ಆಹ್ವಾನಿತರಾಗಿ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಗೌರವಧ್ಯಕ್ಷ ಎಸ್.ಬಿ.ಜಯರಾಮ ರೈ ಬಳಜ್ಜ, ಪ್ರಗತಿಪರ ಕೃಷಿಕ ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ವೇಣುಗೋಪಾಲ ರೈ ನೂಜಿ, ಕೆಪಿಎಸ್ ಕೆಯ್ಯೂರು ಪದವಿಧರೇತರ ಮುಖ್ಯ ಗುರು ಬಾಬು.ಎಂ,  ಬಿ.ಜಿ.ಎಂ.ಮಾಡಾವು ಗೌರವಾಧ್ಯಕ್ಷ ಇಬ್ರಾಹಿಂ ಹಾಜಿ ಮಾಡಾವು, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆ ಕೆಯ್ಯೂರು ಒಕ್ಕೂಟ ಚಂದ್ರಶೇಖರ ಕೆ.ಎಸ್, ಕೆಯ್ಯೂರು,  ಕೆಯ್ಯೂರು ಗ್ರಾ.ಪಂ, ಅದ್ಯಕ್ಷ ಶರತ್ ಕುಮಾರ್ ಮಾಡಾವು, ಮಾಜಿ ಅದ್ಯಕ್ಷ ಹರಿಶ್ಚಂದ್ರ ಆಚಾರ್ಯ ಕೊಡಂಬು, ಕೆಯ್ಯೂರು ಗ್ರಾ.ಪಂ. ಸದಸ್ಯ ಅಬ್ದುಲ್ ಖಾದರ್ ಮೇರ್ಲ, ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಕೆಯ್ಯೂರು ಗೌರವ ಸಲಹೆಗಾರರಾದ ಹುಸೈನಾರ್ ಸಂತೋಷ್ ನಗರ, ಸದಾಶಿವ ಭಟ್ ಎ, ಉದ್ಯಮಿಗಳಾದ ಶೀನಪ್ಪ ರೈ ದೇವಿನಗರ ಶ್ರೀ ದುರ್ಗಾ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಕೆ.ಎಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕ್ಲಬ್ ಸದಸ್ಯರಾದ  ಪ್ರಸಾದ್ ಎಂ.ಎಸ್, ಮಹಮ್ಮದ್ ಆಲಿ, ಸುದೇಶ್ ರೈ ಬಳಜ್ಜ ಇವರ ಸವಿ ನೆನಪಿಗಾಗಿ ಪುಷ್ಪರ್ಚಾನೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಮುಖ್ಯ ಅತಿಥಿಗಳಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ತಂಡದ ನಾಯಕರಾದ ಸಹಜ್ ರೈ ಬಳಜ್ಜ, ಮನೋಜ್ ರೈ ಮಾಡಾವು, ದೀಪಕ್ ರೈ ಮಾಡಾವು, ಸತೀಶ್ ರೈ ದೇವಿನಗರ, ಜಯಂತ ಕೊಲ್ಯ ಪೆರುವಾಜೆ, ಶರತ್ ಕುಮಾರ್ ಮಾಡಾವು, ಪ್ರಸನ್ನ ಕುಮಾರ್ ಎಂ.ಪಿ ಮಾಡಾವು, ಅನೀಶ್ ಸಂತೋಷ್ ನಗರ, ನಾಸಿರ್ ಮಾಡಾವು, ಅಶ್ವಥ್ ಕೆ.ಎಸ್ ಕಣಿಯಾರು, ಅಶೋಕ್ ಕೆ.ಎಸ್ ಕಣಿಯಾರು, ರವೀಂದ್ರ ಕೆ.ಎಸ್ ಕಣಿಯಾರು, ಕೃಷ್ಣ ಪ್ರಸಾದ್ ರೈ ಕಣಿಯಾರು, ವೀನಿತ್ ರೈ ದೇರ್ಲ, ಶರತ್ ಕುಮಾರ್ ರೈ ದೇರ್ಲ, ದಿನೇಶ್ ಕೆ.ಎಸ್, ದೀಪಕ್ ಕೆ.ಎಸ್, ಪ್ರಶಾಂತ್ ಕುಮಾರ್, ಕ್ಲಬ್ ನ ವತಿಯಿಂದ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ಲಬ್ ನ ಗೌರವ ಸಲಹೆಗಾರ  ಕ್ಲಬ್ ನ ಗೌರವ ಸಲಹೆಗಾರ ತಾರಾನಾಥ ರೈ ಕೊಡಂಬು ಸ್ವಾಗತಿಸಿ,‌ ವಂದಿಸಿದರು.

LEAVE A REPLY

Please enter your comment!
Please enter your name here