ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ, ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಅನಾವರಣ

0

ಕಾಣಿಯೂರು : ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ, ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ಬೇರಿಕೆ ವತಿಯಿಂದ ಫೆ.17 ಮತ್ತು ಫೆ.18ರಂದು ನಡೆಯಲಿರುವ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಹಾಗೂ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣವನ್ನು ಕ್ಷೇತ್ರದಲ್ಲಿ ಅನಾವರಣಗೊಳಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಸಲಹಾ ಸಮಿತಿ ಗೌರವಾಧ್ಯಕ್ಷ ನರಸಿಂಹ ಪ್ರಸಾದ್ ಪಾಂಗಣ್ಣಾಯ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್ ಕಾರ್ಲಾಡಿ, ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ, ಕೋಶಾಧಿಕಾರಿ ಕುಂಞಣ್ಣ ನಾಯ್ಕ, ಉಪಾಧ್ಯಕ್ಷ ಸಂಜೀವ ಗೌಡ ಕೂರ, ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ಬೇರಿಕೆ, ಉಪಾಧ್ಯಕ್ಷ ಉಮೇಶ್ ಬೇರಿಕೆ, ಜತೆ ಕಾರ್ಯದರ್ಶಿ ಬಾಬು ಕಾರ್ಲಾಡಿ, ಕಾಣಿಯೂರು ರಾಶಿ ಕಾಂಪ್ಲೆಕ್ಸ್ ಮಾಲಕ ಚಂದ್ರಶೇಖರ್ ಬರೆಪ್ಪಾಡಿ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ, ಸವಣೂರು ಮೆಸ್ಕಾಂನ ಉಮೇಶ್ ಕೆರೆನಾರು, ಯೋಗೀಶ್ ಬರೆಪ್ಪಾಡಿ, ಸುರೇಶ್ ಏರ್ಕಾಮೆ, ವಿಶ್ವನಾಥ ಗೌಡ ಪಾಲ್ತೂರು, ನಮಿರಾಜ್ ಕಾಪೆಜಾಲು, ಮೋಹನ್ ಅನ್ಯಾಡಿ, ಶೇಖರ ಪೂಜಾರಿ ದೋಳ, ತಿಮ್ಮಪ್ಪ ಕೆಡೆಂಜಿ, ಶೀನಪ್ಪ ಬರೆಪ್ಪಾಡಿ, ಶೀನಪ್ಪ ಮುಕ್ಕೂರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here