ಕಡಬ: ಅರುಣ್ ಪುತ್ತಿಲ ಭೇಟಿ, ಕಾರ್ಯಕರ್ತರ ಜತೆ ಸಮಾಲೋಚನಾ ಸಭೆ

0

ಕಡಬ: ಅರುಣ್ ಪುತ್ತಿಲ ಅವರು ಫೆ.3ರಂದು ಕಡಬಕ್ಕೆ ಭೇಟಿ ನೀಡಿ ಕಾರ್ಯಕರ್ತರ ಜತೆ ಸಮಾಲೋಚನಾ ಸಭೆ ನಡೆಸಿದರು. ಸುಬ್ರಹ್ಮಣ್ಯದಿಂದ ಆಗಮಿಸಿದ ಪುತ್ತಿಲ ಅವರು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ಹಾಗೂ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ಪ್ರಾರ್ಥನೆ ಸಲ್ಲಿಸಿದರು.

ಬಳಿಕ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಕಾರ್ಯಕರ್ತರ ಜತೆ ಸಮಾಲೋಚನೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಸಕ್ತ ವಿದ್ಯಾಮಾನಗಳ ಬಗ್ಗೆ ಫೆ.5ರಂದು ಪುತ್ತೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದ ಬಗ್ಗೆ ಕಾರ್ಯಕರ್ತರ ಜತೆ ಚರ್ಚಿಸಿದರು. ಈ ಸಂದರ್ಭದಲ್ಲಿ ಅನಿಲ್ ತೆಂಕಿಲ, ಸನ್ಮಿತ್ರ ರೈ, ಮನೀಶ್ ಕುಲಾಲ್, ಶ್ರೀ ಕಾಂತ್,ಪ್ರವೀಣ್ ಶೆಟ್ಟಿ ತಿಂಗಳಾಡಿ, ಉಮೇಶ್ ಕೋಡಿಬೈಲ್ ಕಡಬದ ಪ್ರಮುಖರಾದ ಕೆ.ಪ್ರಸಾದ್ ಕೆದಿಲಾಯ, ವೆಂಕಟರಮಣ ಕುತ್ಯಾಡಿ, ಗಿರೀಶ್ ಕೊರುಂದೂರು, ಕಾಶಿನಾಥ್ ಗೋಗಟೆ, ಯಶೋಧರ, ಸುರೇಶ್ ಕೋಟೆಗುಡ್ಟೆ, ಜಿನಿತ್ ಮರ್ದಾಳ, ಕಿರಣ್ ಕುಮಾರ್ ಶರತ್ ಅಮ್ಮಣ್ಷಾಯ, ಪ್ರಸಾದ್, ಪೌಶತ್ ಬೊಳ್ಳೂರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here