ಕೋಡಿಂಬಾಡಿ: 17ನೇ ವರ್ಷದ ನಗರ ಭಜನೋತ್ಸವ, 6ನೇ ವರ್ಷದ ಅಶ್ವತ್ಥಪೂಜೆ , 46ನೇ ವರ್ಷದ ಸತ್ಯನಾರಾಯಣ ಪೂಜೆ

0

ಪುತ್ತೂರು: ಧರ್ಮಶ್ರೀ ಭಜನಾ ಮಂದಿರ ಟ್ರಸ್ಟ್ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ವತಿಯಿಂದ ಜ.6ರಂದು ಆರಂಭಗೊಂಡ 17ನೇ ವರ್ಷದ ನಗರ ಭಜನೋತ್ಸವ ಫೆ. 4ರಂದು ಏಕಾಹ ಭಜನೆ ಮಂಗಳದೊಂದಿಗೆ ಸಂಪನ್ನಗೊಂಡಿತು.


ಜ.6ರಂದು ಬೆಳಿಗ್ಗೆ ಭಜನಾ ಮಂದಿರದಲ್ಲಿ ಮಹಾಗಣಪತಿ ಹೋಮ ನಡೆದು ಸಂಜೆ ಮಂದಿರದಿಂದ ಮನೆಮನೆ ಭಜನೆಗೆ ಹೊರಡುವ ಕಾರ್ಯಕ್ರಮ ನಡೆದಿತ್ತು. ಬಳಿಕ ಪ್ರತೀ ರಾತ್ರಿ ಗ್ರಾಮ ವ್ಯಾಪ್ತಿಯಲ್ಲಿ ಬೈಲುವಾರು ಭಜನೆ ನಡೆಯಿತು. ಫೆ.2 ರಂದು ರಾತ್ರಿ ಮನೆಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವ ಕಾರ್ಯಕ್ರಮ ಜರಗಿತು.
ಫೆ.3ರಂದು ಬೆಳಿಗ್ಗೆ ೬ರಿಂದ ಏಕಾಹ ಭಜನೆ ಪ್ರಾರಂಭಗೊಂಡು ಮಧ್ಯಾಹ್ನ 12ಕ್ಕೆ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಅಶ್ವತ್ಥಪೂಜಾ ಕಾರ್ಯಕ್ರಮ, ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಫೆ.4ರಂದು ಬೆಳಿಗ್ಗೆ ಏಕಾಹ ಭಜನೆಯ ಮಂಗಳದೊಂದಿಗೆ ಸಂಪನ್ನಗೊಂಡಿತು.
ಧರ್ಮಶ್ರೀ ಭಜನಾ ಮಂದಿರ ಟ್ರಸ್ಟ್ ಗೌರವಾಧ್ಯಕ್ಷ ಚಂದ್ರಹಾಸ ರೈ ಸರೋಳಿ, ಅಧ್ಯಕ್ಷ ಶೇಖರ ಪೂಜಾರಿ ನಿಡ್ಯ, ಕಾರ್ಯದರ್ಶಿ ದಯಾನಂದ ಗೌಡ ಬೋಳಾಜೆ, ಪ್ರಧಾನ ಅರ್ಚಕ ಅನಂತೇಶ ಮಯ್ಯ ಮತ್ತು ಅರ್ಚಕ ದೀಪಕ್ ಮಣಿಯಾಣಿ ಮತ್ತಿತರರು ನೇತೃತ್ವ ವಹಿಸಿದ್ದರು.

6ನೇ ವರ್ಷದ ಅಶ್ವತ್ಥಪೂಜೆ, 46ನೇ ವರ್ಷದ ಸತ್ಯನಾರಾಯಣ ಪೂಜೆ:
ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಸಮಿತಿ ಅಶ್ವತ್ಥಕಟ್ಟೆ ಕೋಡಿಂಬಾಡಿ ಇದರ ವತಿಯಿಂದ ಫೆ.3ರಂದು ಮಧ್ಯಾಹ್ನ ಅಶ್ವತ್ಥಕಟ್ಟೆಯಲ್ಲಿ ಆರನೇ ವರ್ಷದ ಸಾರ್ವಜನಿಕ ಅಶ್ವತ್ಥಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 46ನೇ ವರ್ಷದ ಸತ್ಯನಾರಾಯಣ ಪೂಜೆ, ವೇದಮೂರ್ತಿ ಶ್ರೀವತ್ಸ ಕೆದಿಲಾಯ ಶಿಬರ ಅವರಿಂದ ಕಥಾವಾಚನ ನಡೆಯಿತು. ಬಳಿಕ ಪ್ರಸಾದ ವಿತರಣೆ, ಅನ್ನತರ್ಪಣೆ ಜರಗಿತು. ಸಮಿತಿಯ ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಅಧ್ಯಕ್ಷ ಕೇಶವ ಭಂಡಾರಿ‌ ಕೈಪ, ಪ್ರಧಾನ‌ ಕಾರ್ಯದರ್ಶಿ ದೇವಾನಂದ ಕೆ., ಅರ್ಚಕ ಬಾಲಕೃಷ್ಣ ಐತಾಳ್ ಸಹಿತ ಹಲವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here