ಶ್ರೀ ಕ್ಷೇತ್ರ ಕೆಯ್ಯೂರು ದೇವಳದಲ್ಲಿ ಹರಕೆಯ ದೊಡ್ಡ ರಂಗಪೂಜೆ , ಭಜನಾ ಕಾರ್ಯಕ್ರಮ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರಿನಲ್ಲಿ ಶ್ರೀ ಮಹಮ್ಮಾಯಿ ಮರಾಠಿ ಸಮಾಜ ಸೇವಾ ಸಂಘ ಕೆಯ್ಯೂರು ವತಿಯಿಂದ ದೊಡ್ಡ ರಂಗಪೂಜೆ ಮತ್ತು ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಕೆಯ್ಯೂರು ಭಜನಾರ್ಥಿಗಳಿಂದ ಭಜನಾ ಕಾರ್ಯಕ್ರಮ ಫೆ.6ರಂದು ನಡೆಯಿತು.

ಆರ್ಚಕರಾದ ಶ್ರೀನಿವಾಸರಾವ್ ಮತ್ತು ಆನಂದ್ ಭಟ್ ಪೂಜೆ ನೇರವೇರಿಸಿದರು. ನಂತರ ಮಹಾಪೂಜೆ, ಪ್ರಸಾದ ವಿತರಣೆ ನಡೆದು, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಭಕ್ತಾದಿಗಳು ನೀಡಿದ ವಿದ್ಯುತ್ ದೀಪಗಳಿಗೆ ಶ್ರೀ ಕ್ಷೇತ್ರದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಲ, ಶ್ರೀ ಕ್ಷೇತ್ರದ ಆವರಣ ಗೋಡೆಗೆ ಅಳವಡಿಸಲಾದ ವಿದ್ಯುತ್ ದೀಪಗಳ ಸ್ವಿಚ್ ಅನ್ನು ಅದುಮುವ ಮೂಲಕ  ದೀಪಗಳನ್ನು ಪ್ರಜ್ವಲಿಸುವ ಮೂಲಕ ಚಾಲನೆ ಮಾಡಲಾಯಿತು.

LEAVE A REPLY

Please enter your comment!
Please enter your name here