ಬನ್ನೂರು ಶ್ರೀ ಬಲಮುರಿ ವಿದ್ಯಾಗಣಪತಿ ದೇವರಿಗೆ ಮೂಡಪ್ಪ ಸೇವೆ, ಪ್ರತಿಷ್ಠಾವರ್ಧಂತಿ – ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಮಾ.3 ರಂದು ಬನ್ನೂರು ಕರ್ಮಲ ಶ್ರೀ ಬಲಮುರಿ ವಿದ್ಯಾಗಣಪತಿ ದೇವರಿಗೆ ನಡೆಯು ಮೂಡಪ್ಪ ಸೇವೆ ಮತ್ತು ಮಾ.4ರಂದು ನಡೆಯುವ ಪ್ರತಿಷ್ಠಾ ವರ್ಧಂತಿಯ ಆಮಂತ್ರಣ ಪತ್ರ ಫೆ.10ರಂದು ಶ್ರೀ ದೇವರ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ನ್ಯಾಯವಾದಿ ಮಹೇಶ್ ಕಜೆ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಅರ್ಚಕ ಉದಯ ಭಟ್ ಶ್ರೀ ದೇವರಿಗೆ ಆರತಿ ಬೆಳಗಿದರು. ಈ ಸಂದರ್ಭದಲ್ಲಿ ಪುಳು ಈಶ್ವರ ಭಟ್, ಸುರೇಶ್ ಸುರುಡೇಲು, ಮಂಜುನಾಥ್ ವಿಜಯ ಸರ್ವಿಸ್, ಶಿವಶಂಕರ್ ಭಟ್, ಸಂತೋಷ್ ಬೋನಂತಾಯ, ಶರಾವತಿ ರವಿನಾರಾಯಣ, ಸುಬ್ರಹ್ಮಣ್ಯ ಭಡ್, ಕಿರಣ್ ಶ್ಯಾಮಸುದರ್ಶನ್‌ ಭಟ್‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here