ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಸಾರ್ವಜನಿಕ ಸಭೆ

0

ಕೆಯ್ಯೂರು: ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನ ಕೆಯ್ಯೂರು ಸಭಾಂಗಣದಲ್ಲಿ ಫೆ.12ರಂದು ಬೆಳಗ್ಗೆ 10.30 ಗಂಟೆಗೆ ಶ್ರೀ ಕ್ಷೇತ್ರ ಕೆಯ್ಯೂರು ದೇವಿಯ ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ಉತ್ಸವ ಸಮಿತಿ ರಚಿಸುವ ಕುರಿತು ಸಾರ್ವಜನಿಕ ಸಭೆಯು ಶ್ರೀ ಕ್ಷೇತ್ರ ಆಡಳಿತಾಧಿಕಾರಿ ನಮಿತಾ.ಎ.ಕೆ ಅಧ್ಯಕ್ಷತೆಯಲ್ಲಿ ದೇವಳದ ಸಭಾಂಗಣದಲ್ಲಿ ನಡೆಯಿತು.

ಕಳೆದ ವರ್ಷ ನಡೆದ ದೇವಳದ ಖರ್ಚು ವೆಚ್ಚಗಳ ವರದಿಯನ್ನು ದೇವಳದ ಕಾರ್ಯದರ್ಶಿ ಚಂದ್ರಶೇಖರ ರೈ ಕಜೆ ಮಂಡಿಸಿದರು. ಈ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವದ ಉತ್ಸವ ಸಮಿತಿ ಅಧ್ಯಕ್ಷರಾಗಿ ಇ.ಸಂತೋಷ್ ಕುಮಾರ್ ರೈ ಇಳಂತಾಜೆ, ಭಕ್ತರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು ಮತ್ತು ವಿವಿಧ ಸಮಿತಿಗಳನ್ನು ರಚಿಸಿ ಪಧಾದಿಕಾರಿಗಳನ್ನು ನೇಮಿಸಲಾಯಿತು. ‌ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಶಶಿಧರ ರಾವ್ ಬೊಳಿಕಲ, ಚೆನ್ನಪ್ಪ ರೈ ದೇರ್ಲ, ಮಾಜಿ ಸದಸ್ಯರುಗಳು, ಮಾಜಿ ಉತ್ಸವ ಸಮಿತಿ ಅಧ್ಯಕ್ಷ ಎ.ಕೆ.ಜಯರಾಮ ರೈ ಕೆಯ್ಯೂರು, ಅರ್ಚಕ ವೃಂದ, ಶ್ರೀ ದುರ್ಗಾ ಭಜನಾಮಂಡಳಿ ಕೆಯ್ಯೂರು ಅದ್ಯಕ್ಷರು,ಮತ್ತು ಸದಸ್ಯರುಗಳು, ವಿವಿದ ಸಂಘ ಸಂಸ್ಥೆಗಳು, ಸಿಬ್ಬಂದಿ ವರ್ಗ, ಊರಿನ ಹತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಶ್ರೀ ಕ್ಷೇತ್ರದ ಸಿಬ್ಬಂದಿ ಪ್ರಮೀತ್ ರಾಜ್ ಕಟ್ಟತ್ತಾರು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here