ಉಪ್ಪಿನಂಗಡಿ: ಸರ್ಗಮ್ ಸ್ಟುಡಿಯೋ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಕಾಮತ್ ಬಿಲ್ಡಿಂಗ್‌ನ ಮೂರನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡ ‘ಸರ್ಗಮ್’ ಸ್ಟುಡಿಯೋವನ್ನು ಉದ್ಯಮಿ ಕರಾಯ ಗಣೇಶ್ ನಾಯಕ್ ಅವರು ದೀಪ ಪ್ರಜ್ವಲನೆಗೈಯುವ ಮೂಲಕ ಉದ್ಘಾಟಿಸಿದರು.


ಸರ್ಗಮ್ ಸ್ಟುಡಿಯೋದಲ್ಲಿ ಧ್ವನಿ ಮುದ್ರಣ, ಧ್ವನಿ ಸಮ್ಮಿಶ್ರಣ, ಸಂಗೀತ ಸಂಯೋಜನೆ ಸೇರಿದಂತೆ ಸಂಗೀತ ಕ್ಷೇತ್ರದ ಅನಾನ್ಯ ಸೇವೆಗಳನ್ನು ನೀಡುವುದರೊಂದಿಗೆ ಆಡಿಯೋ ಮತ್ತು ವೀಡಿಯೋ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪುತ್ತೂರಿನ ತ್ರಿವಿಕ್ರಮ್ ಭಟ್ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ವಸಂತ ಪಡಿಯಾರ್, ಕೃಷ್ಣ ಪಡಿಯಾರ್, ರಾಧಿಕಾ ಪಡಿಯಾರ್, ನವನೀತ್ ಭಟ್, ನಮೃತಾ ಭಟ್, ಗಿರಿಧರ ನಾಯಕ್, ಮಮತಾ ನಾಯಕ್, ಸಂತೋಷ್ ಕಾಮತ್, ಸುಮನ ಕಾಮತ್, ಗೌತಮ್ ನಾಯಕ್, ಗೌರವ್ ನಾಯಕ್, ಗಿರೀಶ್ ನಾಯಕ್, ಪ್ರತೀಕ್ಷಾ ನಾಯಕ್, ಮೀರಾ ಪ್ರಭು, ಡಾ. ನಿರಂಜನ್ ರೈ, ಮಹೇಶ್ ಶೆಟ್ಟಿ, ರವೀಂದ್ರ ದರ್ಬೆ, ಉಪ್ಪಿನಂಗಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಾಲಯದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ, ಮತ್ತು ನಾಗರಾಜ ಭಟ್, ಹರೀಶ್ ಪೈ, ರವೀಂದ್ರ ಭಟ್, ಉದಯ ಕುಮಾರ್, ಯು.ಜಿ.ರಾಧಾ, ಮಾಲಕ ಸಾತ್ವಿಕ್ ಪಡಿಯಾರ್ ಅವರ ತಂದೆ ಕೆ. ಶ್ರೀನಿವಾಸ ಪಡಿಯಾರ್, ತಾಯಿ ಜಯಶ್ರೀ ಪಡಿಯಾರ್ ಆಗಮಿಸಿ, ಶುಭ ಹಾರೈಸಿದರು.ಮಾಲಕ ಕೆ. ಸಾತ್ವಿಕ್ ಪಡಿಯಾರ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

LEAVE A REPLY

Please enter your comment!
Please enter your name here