ಕೃಷ್ಣನಗರ :ಇಲೆಕ್ಟ್ರಿಷಿಯನ್ ಭರತ್ ನಿಧನ

0

ಪುತ್ತೂರು: ಕೆಮ್ಮಾಯಿ ಕೃಷ್ಣನಗರ ಬಡಾವು ನಿವಾಸಿ ಇಲೆಕ್ಟ್ರಿಷಿಯನ್ ಭರತ್(38ವ)ರವರು ಫೆ.13ರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಪುತ್ತೂರು ಮುಖ್ಯರಸ್ತೆ ಶಾಂತಿನಾಥ ಬಸದಿಯ ಬಳಿ ಕವಿತಾ ಎಲೆಕ್ಟ್ರಿಕಲ್‌ನ ಮಾಲಕ ರುಕ್ಮಯ ಎಂಬವರ ಪುತ್ರ ಅವಿವಾಹಿತ ಭರತ್ ಅವರು ಕೂಡಾ ಇಲೆಕ್ಟ್ರಿಷಿಯನ್ ವೃತ್ತಿ ಮಾಡುತ್ತಿದ್ದರು. ಫೆ.12 ರಂದು ರಾತ್ರಿ ಮನೆಯಲ್ಲಿ ಮಲಗಿದ್ದ ಅವರಿಗೆ ಆರೋಗ್ಯದಲ್ಲಿ ಏರುಪೇರಾಗಿ ಬೆಳಗ್ಗಿನ ಜಾವ ಮೃತಪಟ್ಟಿದ್ದರು. ಮೃತರು ತಂದೆ ರುಕ್ಮಯ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here