ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯಿಂದ ಪಿಎಂಜೆಜೆಬಿವೈ ಯೋಜನೆಯ ಫಲಾನುಭವಿ ಕುಟುಂಬಗಳಿಗೆ ವಿಮೆ ಚೆಕ್ ವಿತರಣೆ

0

ಪುತ್ತೂರು: ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಫಲಾನುಭವಿ ಮೂರು ಕುಟುಂಬಗಳಿಗೆ ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖೆಯಿಂದ ತಲಾ ರೂ.2ಲಕ್ಷದ ಚೆಕ್ ವಿತರಿಸಲಾಯಿತು. ಯೋಜನೆಯ ಫಲಾನುಭವಿಗಳಾದ ಬೆಟ್ಟಂಪಾಡಿ ಗ್ರಾಮದ ಗೋಳಿಪದವು ನಿವಾಸಿ ದಿ.ಶೇಖರ್‌ ಪತ್ನಿ ಲಲಿತಾಶೇಖರ್‌ರವರಿಗೆ, ಉಪ್ಪಳಿಗೆ ಬಾರ‍್ತಕುಮೇರು ನಿವಾಸಿ ದಿ.ಖಾಸಿಂ ಪತ್ನಿ ತಾಹೀರಾರವರಿಗೆ ಹಾಗೂ ಕೇಕನಾಜೆ ನಿವಾಸಿ ದಿ.ಖಾಸಿಂ ಪತ್ನಿ ಆಯಿಷಾರವರಿಗೆ ತಲಾ ರೂ.2ಲಕ್ಷದ ಚೆಕ್‌ಗಳನ್ನು ಬೆಟ್ಟಂಪಾಡಿ ಶಾಖಾ ಮ್ಯಾನೇಜರ್ ಭಾವನಾ ಉಮೇಶ್ ಹಸ್ತಾಂತರಿಸಿದರು. ಸಿಬಂದಿಗಳಾದ ರಮೇಶ್ ಕುರಿಯ, ಅಶ್ವಿನ್ ಕುಮಾರ್, ಧನ್ಯ, ಕುಶಾಲಪ್ಪ ಗೌಡ, ಭುವನ, ಬ್ಯಾಂಕ್ ಬಿಸಿ ಪ್ರಭಾಕರ್ ರೈ ಬಾಜುವಳ್ಳಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here