ಕಾರು ಅಪಘಾತ – ಕಾವು ಹೇಮಾನಾಥ ಶೆಟ್ಟಿ ಅಪಾಯದಿಂದ ಪಾರು

0

ಪುತ್ತೂರು: ಕಾಂಗ್ರೆಸ್‌ ಮುಖಂಡ ಕಾವು ಹೇಮಾನಾಥ ಶೆಟ್ಟಿ ಪ್ರಯಾಣಿಸುತಿದ್ದ ಕಾರು ಫೆ.24 ರ ತಡ ರಾತ್ರಿ ಪುತ್ತೂರು ಹೊರ ವಲಯ ಬೆದ್ರಾಳದ ಬಳಿ ಅಪಘಾತಕ್ಕೆ ಈಡಾಗಿದ್ದು, ಹೇಮಾನಾಥ ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ.

ಕಾವು ಹೇಮಾನಾಥ ಶೆಟ್ಟಿ ಹಾಗೂ ತಂಡದವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಹಾಗೂ ಫೋರ್ಡ್‌ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಹೇಮಾನಾಥ ಶೆಟ್ಟಿಯವರು ಕಡಬ ತಾಲೂಕಿನ ಅಲಂಕಾರು, ಮನವಳಿಕೆ ತರವಾಡು ಮನೆಯಲ್ಲಿ ನಡೆಯುತ್ತಿದ್ದ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಪಸ್ಸು ಆಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.

ಹೇಮಾನಾಥ ಶೆಟ್ಟಿ ಪ್ರಯಾಣಿಸುತ್ತಿದ್ದ ಕಾರು ಬೆದ್ರಾಳ ಬಳಿ ತಲುಪಿದ್ದಂತೆ ಎದುರಿನಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿಯಾಗಿ ಬಂದಿದೆ. ಇದನ್ನು ಗಮನಿಸಿದ ಇನ್ನೋವಾ ಚಾಲಕ ಕಾರನ್ನು ರಸ್ತೆ ಬಿಟ್ಟು ಪಕ್ಕಕ್ಕೆ ಸರಿಸಿದ್ದಾನೆ. ಆ ವೇಳೆಗಾಗಲೇ ಪಕ್ಕದಲ್ಲಿದ್ದ ಕಟ್ಟೆಗೆ ಕಾರು ಬಡಿದಿದ್ದು, ಇನ್ನೊಂದು ಬದಿಗೆ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿದೆ. ಇದರಿಂದ ಇನ್ನೋವಾ ಕಾರಿಗೆ ಅಪಾರ ಹಾನಿಯಾಗಿದ್ದು, ಹಿಂಬದಿ ಚಕ್ರ ಕಿತ್ತು ಬಂದಿದೆ. ಇನ್ನೋವಾ ಕಾರಿನಲ್ಲಿ ಕಾವು ಹೇಮಾನಾಥ ಶೆಟ್ಟಿ ಸೇರಿದಂತೆ ಆಪ್ತ ಸಹಾಯಕ ರವಿ ಪ್ರಸಾದ್‌ ಶೆಟ್ಟಿ, ದೈವಗಳ ಮಧ್ಯಸ್ಥ ಮನ್ಮಥ ಶೆಟ್ಟಿ ಕೊಡಿಪ್ಪಾಡಿ ಹಾಗೂ ಚಾಲಕ ಪ್ರಯಾಣಿಸುತ್ತಿದ್ದು, ಮತ್ತೊಂದು ಕಾರಿನಲ್ಲಿ ಚಾಲಕ ಮಾತ್ರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್‌ ಎರಡು ಕಾರಿನಲ್ಲಿದ್ದವರು ಯಾವುದೇ ಆಪಾಯಗಳಿಲ್ಲದೆ ಪಾರಾಗಿದ್ದಾರೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ :

LEAVE A REPLY

Please enter your comment!
Please enter your name here