ಯಾವೂದೇ ಹಿಂದೂವಿಗೆ ಅನ್ಯಾಯವಾದರೂ ಸಹಿಸಿಕೊಳ್ಳುವುದಿಲ್ಲ – ಮುರಳಿಕೃಷ್ಣ ಹಸಂತಡ್ಕ ಬಂಧನ ಸಿದ್ದರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ಮುಖ – ಅರುಣ್ ಕುಮಾರ್ ಪುತ್ತಿಲ

0

ಭಯೋತ್ಪಾದಕ ಚಟುವಟಿಕೆಯ ವಿರುದ್ಧ ತುಮಕೂರಿನಲ್ಲಿ ನಡೆಯಲಿದ್ದ ಪ್ರತಿಭಟನೆಗೆ ಭಾಷಣ ಮಾಡಲೆಂದು ತೆರಳುತ್ತಿದ್ದ ಬಜರಂಗದಳದ ಪ್ರಾಂತ ಸಹ ಸಂಯೋಜಕ್‌ ಮುರಳೀಕೃಷ್ಣ ಹಸಂತಡ್ಕರನ್ನು ತುಮಕೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿರುವುದು ಖಂಡನೀಯ ಘಟನೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ಎಲ್ಲಿಯವರೆಗೆ ತಲುಪಿದೆ ಎಂದರೆ ಭಯೋತ್ಪಾದನೆಯ ವಿರುದ್ದ ಕೂಡ ಮಾತನಾಡದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ.

ರಾಜ್ಯದಲ್ಲಿ ಯಾವೂದೇ ಹಿಂದೂವಿಗೆ ಅನ್ಯಾಯವಾದರೂ ನಾವು ಅವರ ಜೊತೆಗಿರುತ್ತೇವೆ ಎಂದು ಅರುಣ್ ಪುತ್ತಿಲ ಹೇಳಿದರು.

LEAVE A REPLY

Please enter your comment!
Please enter your name here