ಸೆಕೆಂಡ್ ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಫ್ – ಪ್ರಶಸ್ತಿ ಗೆದ್ದ ದಿನೇಶ್ ಆಚಾರ್ಯ

0

ಪುತ್ತೂರು: ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಇದರ ವತಿಯಿಂದ ಮಾ.9 ರಿಂದ 10ರ ವರೆಗೆ ನಡೆದ ಎರಡನೆಯ ದಕ್ಷಿಣ ಭಾರತ ಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕು ನರಿಮೊಗರು ಗ್ರಾಮದ ಶೆಟ್ಟಿಮಜಲು ದಿನೇಶ್ ಆಚಾರ್ಯ (ದಿ.ನಾರಾಯಣ ಆಚಾರ್ಯ ಮತ್ತು ವಸಂತಿ ನಾರಾಯಣ ಆಚಾರ್ಯ ದಂಪತಿ ಪುತ್ರ) ಇವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ. 200 ಮೀ ಓಟದಲ್ಲಿ ಐದನೇ ಸ್ಥಾನ, 400 ಮೀ ಓಟದಲ್ಲಿ ನಾಲ್ಕನೇ ಸ್ಥಾನ, 800 ಮೀ ಓಟದಲ್ಲಿ ಆರನೇ ಸ್ಥಾನ ಹಾಗೂ 100 ಮೀಟರ್ ರಿಲೇ ಮತ್ತು 400 ಮೀಟರ್ ರಿಲೇಯಲ್ಲಿ ನಾಲ್ಕನೇ ಸ್ಥಾನ ಗಳಿಸಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಸ್ತುತ ಬೊಳ್ವಾರು ಪ್ರಗತಿ ಆಸ್ಪತ್ತೆಯಲ್ಲಿ ಅಕೌಂಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಮುಂಡೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಪಣೆ ಸರಕಾರಿ ಪ್ರೌಢಶಾಲೆ, ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಹಾಗೂ ನೆಹರುನಗರ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಯಾಗಿದ್ದಾರೆ.

LEAVE A REPLY

Please enter your comment!
Please enter your name here