ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೆ ಆಮಂತ್ರಣ ಪತ್ರ ಬಿಡುಗಡೆ

0

ರಾಮಕುಂಜ: ಮಾ.29ರಿಂದ ಎ.3ರ ತನಕ ನಡೆಯಲಿರುವ ಕಡಬ ತಾಲೂಕು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಮಹಾಶಿವರಾತ್ರಿಯಂದು ಬಿಡುಗಡೆಗೊಳಿಸಲಾಯಿತು.
ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅಂಬಾ, ಕಾರ್ಯದರ್ಶಿ ಶಾಂತರಾಮ ಬೇಂಗದಪಡ್ಪು, ಸದಸ್ಯರಾದ ವಿನಯ ಕುಮಾರ್ ರೈ ಕೊಯಿಲಪಟ್ಟೆ, ಸಂಜೀವ ಗೌಡ ಕೊನೆಮಜಲು, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಚೇತನ್ ಕುಮಾರ್ ಆನೆಗುಂಡಿ, ಉಪಾಧ್ಯಕ್ಷರಾದ ಭವಾನಿಶಂಕರ ಗೌಡ ಪರಂಗಾಜೆ, ಬಾಲಕೃಷ್ಣ ಗೌಡ ಬೇಂಗದಪಡ್ಪು, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ರಾಜೀವ ಪೊಸಲಕ್ಕೆ, ರುಕ್ಮಯ್ಯ ಪಲ್ಲಡ್ಕ, ವಿನೋಧರ ಮಾಳ, ಲಕ್ಷ್ಮಣ ಆನೆಗುಂಡಿ, ಸುಧೀಶ ಪಟ್ಟೆ, ರವಿ ಸಂಕೇಶ, ರಾಮಯ್ಯ ಗೌಡ ಬುಡಲೂರು ಮೊದಲಾದವರು ಇದ್ದರು.

ಮಹಾಶಿವರಾತ್ರಿ ಪೂಜೆ:
ಮಹಾಶಿವರಾತ್ರಿ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ದೇವಸ್ಥಾನದ ತಂತ್ರಿ ವೆಂಕಟ್ರಮಣ ಕುದ್ರೆತ್ತಾಯ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆಯಿತು. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಸಾಯಂಕಾಲ ಶ್ರೀ ದುರ್ಗಾ ಪೂಜೆ, ಏಕದಶ ರುದ್ರಾಭಿಷೇಕ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here